ಮಗುವಿನೊಂದಿಗೆ ತವರು ಮನೆಗೆ ಹೋದ ಪತ್ನಿ, ನೊಂದ ಪತಿ ಆತ್ಮಹತ್ಯೆ

ಮೈಸೂರು: ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಗು ತವರು ಮನೆ ಸೇರಿದ ಹಿನ್ನಲೆ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಗೋಕುಲಂನಲ್ಲಿ ನಡೆದಿದೆ.

ಸುನೀಲ್ ನಾಯಕ್ ಮೃತ ದುರ್ದೈವಿ. ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಇದ್ದು, ಆಗಾಗ ಗಲಾಟೆ ನಡೆಯುತ್ತಿತ್ತು. ಪತಿಯ ವರ್ತನೆಗೆ ಬೇಸತ್ತ ಪತ್ನಿ ಮಗು ಸಮೇತ ತವರು ಮನೆ ಸೇರಿದ್ದಳು. ಇದರಿಂದ ಮನನೊಂದ ಸುನೀಲ್ ನಾಯಕ್ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!