ಅಮ್ಮ ರೈಲು ದುರಂತದಲ್ಲಿ ತೀರಿಹೋದ್ರು.. ಸರ್ಕಾರಿ ನೌಕರಿಗಾಗಿ ಸುಳ್ಳು ಹೇಳಿದ ‘ಸುಪುತ್ರ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ನೌಕರಿಗಾಗಿ ಜನ ಏನೆಲ್ಲಾ ಮಾಡ್ತಾರೆ ಅಲ್ವಾ? ಸಿಕ್ಕಾಪಟ್ಟೆ ಓದೋದು, ಯಾವ ಸಮಾರಂಭಗಳಿಗೂ ಬರದೇ ಅಭ್ಯಾಸ ಮಾಡೋದು, ಬಾಯ್ ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡು ಓದಿನ ಬಗ್ಗೆ ಗಮನ ಕೊಡೋದು…

ಆದರೆ ಇಲ್ಲೊಬ್ಬ ಭೂಪ ಅಮ್ಮನ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳೋದಕ್ಕೆ ಬದುಕಿರುವ ತನ್ನ ತಾಯಿಯನ್ನೇ ಸತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ.

ಒಡಿಶಾದ ಬಾಲಸೋರ್‌ನ ಭೀಕರ ರೈಲು ಅಪಘಾತದಲ್ಲಿ ನನ್ನ ತಾಯಿ ತೀರಿಕೊಂಡಿದ್ದಾರೆ, ಅವರ ಸರ್ಕಾರಿ ನೌಕರಿಯನ್ನು ನನಗೆ ಕೊಡಿ ಎಂದು ಕೇಳಿದ್ದಾನೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಲು ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ನಡೆಸಿದಾಗ ಆತನ ತಾಯಿ ಐದು ವರ್ಷದ ಹಿಂದೆಯೇ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ, ಆರೋಪಿ ಸಂಜಯ್ ಕುಮಾರ್ ಸಚಿವರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದಾನೆ. ಆತನ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲ ಕಂಡುಬಂದಿದೆ. ಅಲ್ಲದೇ ಆತನ ತಾಯಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾವ ದಾಖಲೆಯೂ ದೊರೆತಿಲ್ಲ, ಮೃತದೇಹಗಳನ್ನು ಕುಟುಂಬಗಳಿಗೆ ಹಿಂತಿರುಗಿಸಲು ಮಾಡಿದ ಲಿಸ್ಟ್‌ನಲ್ಲಿ ಅವರ ತಾಯಿ ಹೆಸರಿರಲಿಲ್ಲ. ಅನುಮಾನ ಬಂದು ವಿಚಾರಣೆ ನಡೆಸಿದಾಗ ನೌಕರಿಗಾಗಿ ಆತ ಹೀಗೆ ಮಾಡಿದ್ದು ತಿಳಿದುಬಂದಿದೆ. ಆತ ಬಹಳ ಕಾಲದಿಂದ ನಿರುದ್ಯೋಗಿಯಾಗಿದ್ದು, ಖಿನ್ನತೆಗೆ ಜಾರಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!