ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆ. 24ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಚಾಹರ್ ಹೊರಬಿದ್ದಿದ್ದಾರೆ.
ನಿನ್ನೆ ಲಖನೌನಲ್ಲಿ ನಡೆದ ಅಭ್ಯಾಸದ ವೇಲೆ ಬ್ಯಾಟರ್ ಸೂರ್ಯ ಕುಮಾರ್ ಕೈಗೆ ಇಂಜುರಿಯಾದ ಹಿನ್ನೆಲೆ ಅವರು ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇನ್ನು ವೇಗಿ ಬೌಲರ್ ದೀಪಕ್ ಚಾಹರ್ ಮಂಡಿರಜ್ಜಿನ ಗಾಯದಿಂದ ಲಖನೌ ಹಾಗೂ ಧರ್ಮಶಾಲಾದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯಗಳಿಂದ ಹೊರಬಂದಿದ್ದಾರೆ.
ಈ ಸರಣಿಗೆ ಜಸ್ಪ್ರೀತ್ ಬುಮ್ರಾ ಮರಳುವ ಮೂಲಕ ಟೀಂ ಇಂಡಿಯಾ ಈಗಾಗಲೇ ಬಲಗೊಂಡಿದೆ. ವಿರಾಮದ ನಂತರ ವಾಪಸಾಗಿರುವ ಬುಮ್ರಾ ಸರಣಿಗೆ ಉಪನಾಯಕನಾಗಿಯೂ ಆಯ್ಕೆಯಾಗಿದ್ದಾರೆ.