ಹೊಸದಿಗಂತ ಹುಬ್ಬಳ್ಳಿ:
ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಚ್.ಡಿ. ದೇವೆಗೌಡರು ತಕ್ಷಣ ಜಾರಿಗೆ ಬರುವಂತೆ ಅಮಾನತ್ತು ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಬಂದಿದ್ದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ. ಎಸ್ ಐಟಿ ತನಿಖೆ ಯಿಂದ ಅಪರಾಧ ಸಾಬೀತು ಆದರೆ ಅವರನ್ಜು ಶಾಶ್ವತ ವಾಗಿ ಅಮಾನತ್ತು ಮಾಡಲಾಗುವುದು ಎಂದರು.
ಪ್ರಜ್ವಲ್ ರೇವಣ್ಣ ಅವರ ತಪ್ಪು ಸಾಬೀತು ಆದರೆ ಅವನನ್ನು ಗಲ್ಲಿಗೇರಿಸಲಿ. ಆದರೆ ಹಣ ನೀಡಿ ಪೆನ್ ಡ್ರೈವ್ ಮೂಲಕ ನೂರಾರು ಮಹಿಳೆಯ ಮಾನ ಬೀದಿಗೆ ತಂದ ವ್ಯಕ್ತಿ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.