ಜಾತ್ರೆಗೆ ಹೋಗಿಬರುವುದಾಗಿ ಹೇಳಿದ್ದ ಸ್ವಾಮೀಜಿ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಳ್ಳೋಗಾಲದ ಪಿಜಿ ಪಾಳ್ಯ ಗ್ರಾಮದ ಹೊಸ ಮಠದ ಸ್ವಾಮೀಜಿ ಶವ ಕಾವೇರಿ ತೀರದ ವೆಸ್ಲಿ ಸೇತುವೆ ಬಳಿ ಪತ್ತೆಯಾಗಿದೆ.

ಹೊಸಮಠದ ರಾಜಶೇಖರ ಸ್ವಾಮೀಜಿ ಸುತ್ತೂರು ಜಾತ್ರೆಗೆ ಹೋಗಿ ಬರುವುದಾಗಿ ಹೇಳಿದ್ದರು. ಇದಾದ ಮೂರು ದಿನದ ನಂತರ ಸ್ವಾಮೀಜಿ ಶವವಾಗಿ ಪತ್ತೆಯಾಗಿದ್ದಾರೆ. ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿಸಿದ್ದಾರೆ. ತಕ್ಷಣ ಕರೆ ಮಾಡಿ ಮಾಹಿತಿ ಹುಡುಕಿದ್ದು, ಸ್ವಾಮೀಜಿ ಎಂದು ತಿಳಿದುಬಂದಿದೆ. ಜೀವನದಲ್ಲಿ ಜುಗುಪ್ಸೆಯಿಂದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!