ʼಹಸಿರುಸ್ವಾಮೀಜಿʼ ಸ್ವರ್ಣವಲ್ಲಿ ಶ್ರೀಗಳಿಂದ ಯೋಗ : ಸ್ಪೀಕರ್‌ ಕಾಗೇರಿ ಸಾಥ್

ಹೊಸದಿಗಂತ ವರದಿ ಶಿರಸಿ:
ಯೋಗ ನಮ್ಮ ಜೀವನದ ಬೆಳಕು. ಭಾರತದ ಆತ್ಮವಿದ್ದಂತೆ ಇಡೀ ಜಗತ್ತೇ ಯೋಗ ಒಪ್ಪಿಕೊಂಡಿರವುದು ನಮ್ಮ ಹೆಮ್ಮೆಯಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ಮಾಮೀಜಿ ನುಡಿದರು.

ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಮಂಗಳವಾರ ಸ್ವರ್ಣವಲ್ಲಿ ಮಠದಲ್ಲಿ ನಡೆದ ಯೋಗದಿನದಲ್ಲಿ ಆಶೀರ್ವಚನ ನೀಡಿದರು. ಯೋಗ ಸಿದ್ಧವಾಗಿರುವ ಸೂತ್ರ. ವೈಯಕ್ತಿಕ ನೆಲೆಯಲ್ಲಿ ಯೋಗ ಮಾಡುವ ರೂಢಿ ಇಟ್ಟುಕೊಳ್ಳಬೇಕು. ಪ್ರತಿ ನಿತ್ಯ ಯೋಗ ಮಾಡುವ ಮೂಲಕ ನಮ್ಮನ್ನು ನಾವು ಪ್ರಭಲಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ವತಃ ಸ್ವರ್ಣವಲ್ಲಿ ಶ್ರೀಗಳು ಯೋಗ ಮಾಡಿ ಗಮನ ಸೆಳೆದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!