ಟಿ20 ವಿಶ್ವಕಪ್; ಜಡೇಜಾ – ಬುಮ್ರಾ ಗೈರು; ಹೊಸಬರಿಗೆ ಅವಕಾಶ : ರವಿಶಾಸ್ತ್ರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೊಣಕಾಲು ಗಾಯದಿಂದ ರವೀಂದ್ರ ಜಡೇಜಾ ಮತ್ತು ಬೆನ್ನು ಮೂಳೆಯ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್​ ತಂಡದಿಂದ ಹೊರಗುಳಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಮುಖ್ಯ ಕೋಚ್​ ರವಿಶಾಸ್ತ್ರಿ, ಈ ಇಬ್ಬರ ಅನುಪಸ್ಥಿತಿಯಿಂದ ಹೊಸಬರಿಗೆ ಅವಕಾಶ ದೊರೆಯಲು ಮತ್ತು ತಂಡವನ್ನು ಪರೀಕ್ಷೆಗೆ ಒಡ್ಡಲು ಉತ್ತಮ ಅವಕಾಶ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಎದುರಿನ ಪಂದ್ಯದ ನಂತರ ಬುಮ್ರಾ ಬೆನ್ನು ಮೂಳೆಯ ನೋವಿನಿಂದ ಟಿ20 ವಿಶ್ವಕಪ್​ನಿಂದ ಹೊರಗುಳಿದರು. ಏಷ್ಯಾ ಕಪ್ ​ಟೂರ್ನಿ ಮಧ್ಯೆಯಲ್ಲೇ ಮೊಣಕಾಲು ಗಾಯದಿಂದ ಜಡೇಜಾ ಸಹ ಹೊರಗುಳಿದಿದ್ದರು. ಇಬ್ಬರೂ ಆಟಗಾರರು ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದರು. ಬೌಲಿಂಗ್​ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ ಇಬ್ಬರು ಸ್ಟಾರ್​ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ.
ಬುಮ್ರಾ ಬದಲಿ ಆಟಗಾರರ ಬಗ್ಗೆ ಇನ್ನೂ ಬಿಸಿಸಿಐ ಯಾರನ್ನೂ ಆಯ್ಕೆ ಮಾಡಿಲ್ಲ, ಈ ನಡುವೆ ಕೋಚ್​ ರಾಹುಲ್​ ದ್ರಾವಿಡ್​, ಮಹಮ್ಮದ್ ಶಮಿ ಕೊವಿಡ್​ನಿಂದ ಚೇತರಿಸಿಕೊಂಡು ಟೀಮ್​ ಸೇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಮಹಮ್ಮದ್​ ಶಮಿ ವಿಶ್ವಕಪ್​ ಟೂರ್ನಿಯ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಕಾರಣ ಅವರಿಗೆ ಮೊದಲ ಪ್ರಾಶಸ್ತ್ಯ ಇರಲಿದೆ. ಇಲ್ಲದಿದ್ದಲ್ಲಿ ದಕ್ಷಿಣ ಆಫ್ರಿಕಾ ಎದುರು ಉತ್ತಮ ಬೌಲಿಂಗ್​ ಮಾಡಿದವರ ಆಯ್ಕೆಯೂ ಸಾಧ್ಯತೆ ಇದೆ. ಹರಿಣಗಳ ಎದುರಿನ ಟಿ20 ಪಂದ್ಯಗಳಿಗೆ ಬುಮ್ರಾ ಬದಲಿಯಾಗಿ ಸಿರಾಜ್​ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನೇ ವಿಶ್ವಕಪ್​ಗೂ ಆಡಿಸುವ ಸಾಧ್ಯತೆ ಇದೆ ಎಂದು ರವಿಶಾಸ್ತ್ರಿ ಹೇಳಿದರು.

ಟಿ20 ವಿಶ್ವಕಪ್‌ಗೆ ಸ್ಟ್ಯಾಂಡ್‌ಬೈ ಆಗಿರುವ ಶಮಿ ಸೂಕ್ತ ಆಟಗಾರ. ಅವರಿಗೆ ಆಸ್ಟ್ರೇಲಿಯಾದ ಪಿಚ್​​ಗಳಲ್ಲಿ ಆಡಿದ ಅನುಭವ ಇದೆ. ಕೆಲವು ಆಟಗಾರರು ಗಾಯಗೊಂಡರೂ ಭಾರತದ ತಂಡ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!