ಕುಂಕುಮ, ಬಿಂದಿ ಬಗ್ಗೆ ಮಾತನಾಡುವುದು ಸರಿಯಲ್ಲ: ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

ದಿಗಂತ ವರದಿ ಕಲಬುರಗಿ:

ಕುಂಕುಮ, ಬಿಂದಿ ಬಗ್ಗೆ ಪ್ರಶ್ನಿಸುವ ಯಾವ ನೈತಿಕತೆಯೂ ಮುಸ್ಲೀಂರಿಗೆ ಇಲ್ಲವೆಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.

ಅವರು ನಗರದ ರಾಮ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ಮತ್ತು ಬುಖಾ೯ ಹೊರ ದೇಶಕ್ಕೆ ಸಂಬಂಧ ಪಟ್ಟಿದ್ದು, ಈ ನೆಲದ ಸಂಸ್ಕೃತಿ ಅಲ್ಲವೇ ಅಲ್ಲ ಎಂದರು. ಆದರೆ ಕುಂಕುಮ ಮತ್ತು ಬಿಂದಿ ಹಿಂದೂ ಧರ್ಮದ ಹಾಗೂ ಈ ನೆಲದ ಸಂಸ್ಕೃತಿಯಾಗಿದ್ದು, ಇದರ ಬಗ್ಗೆ ಮಾತನಾಡುವ ಹಕ್ಕು ಮುಸ್ಲೀಂರಿಗೆ ಇಲ್ಲ ಎಂದರು.

ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹಾಗೂ ಸಿದ್ದಲಿಂಗ ಮಹಾಸ್ವಾಮಿಗಳು ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡಾಗಿ ಕತ್ತರಿಸುವೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಸಾವಿರಾರು ಕಾಯ೯ಕತ೯ರು ಸೇರಿ ನಾನು ಸಹ ಇಂದು ಸೇಡಂ ಗೆ ತೆರಳುತ್ತಿದ್ದೇವೆ. ಸೇಡಂ,ನ ಕಾಂಗ್ರೆಸ್ ಮುಖಂಡ ಮುಕ್ರಂಖಾನ ಗೆ ತಾಕತ್ತು ಇದ್ದರೆ ನಮ್ಮನ್ನು ಕತ್ತರಿಸಲಿ ಎಂದು ಸವಾಲು ಹಾಕಿದರು.

ಶ್ರೀ ರಾಮ ಸೇನೆಯ ಕಾಯಾ೯ಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಮುಖಂಡ ಮುಕ್ರಂಖಾನ ಅವರ ಸವಾಲು ಸ್ವೀಕಾರ ಮಾಡಿ ಇವತ್ತು ಸೇಡಂ ಗೆ ಹೊರಟಿದ್ದೇವೆ ಎಂದರು. ನಿನ್ನಂತಹ ಸಾವಿರಾರು ಪುಟ್ಟಗೋಸಿಗಳು ಬಂದು ಹೋಗಿದ್ದಾರೆ. ಅಪಜಲ್ ಖಾನ್,ನನ್ನೆ ಬಿಟ್ಟಿಲ್ಲ. ಇನ್ನೂ ನಿನ್ಯಾವ ಲೆಕ್ಕ ಎಂದು ಹರಿಹಾಯ್ದರು.

ಕಾಂಗ್ರೆಸ್ ಮುಖಂಡ ಮುಕ್ರಂಖಾನ ಅವರಪ್ಪನಿಗೆ ಹುಟ್ಟಿದ್ದರೆ, ಸೇಡಂ ನಲ್ಲಿ ಇರಬೇಕು.ಅವನಿಗೆ ಧೈರ್ಯ ಇದ್ದರೆ ಬಂದು ತುಂಡು ಮಾಡಲಿ ಎಂದು ಹೇಳಿದ ಅವರು, ಸೇಡಂ ಗೆ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!