ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ನಾಯಕನಾಗಿ ಉತ್ತಮ ಚಿತ್ರಗಳನ್ನು ಮಾಡಿ ನಂತರ ಚಿತ್ರಗಳಿಗೆ ಸ್ವಲ್ಪ ಗ್ಯಾಪ್ ನೀಡಿ, ಮತ್ತೊಮ್ಮೆ ಖಳನಾಯಕನಾಗಿ ಹೆಸರು ಮಾಡಿರುವ ನಟ ತಾರಕರತ್ನ ತೀವ್ರ ಅಸ್ವಸ್ಥತೆಗೆ ಗುರಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಟಿಡಿಪಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಕುಪ್ಪಂನಲ್ಲಿ ನಾರಾ ಲೋಕೇಶ್ ಪಾದಯಾತ್ರೆಯಲ್ಲಿ ನಟ ತಾರಕರತ್ನ ಕೂಡ ಭಾಗವಹಿಸಿದ್ದರು. ಪಾದಯಾತ್ರೆ ವೇಳೆ ಲೋಕೋಶ್ ಜೊತೆ ಹೆಜ್ಜೆ ಹಾಕುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಕಾರ್ಯಕರ್ತರು ಕುಪ್ಪಂ ಆಸ್ಪತ್ರೆಗೆ ಕರೆದೊಯ್ದರು.
ನಟ ತಾರಕರತ್ನ ಸದ್ಯ ಕುಪ್ಪಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕು ದಿನಗಳಿಂದ ವಿಶ್ರಾಂತಿಯಿಲ್ಲದೆ ನಾರಾ ಲೋಕೇಶ್ ಜೊತೆ ಸೇರಿ ಪ್ರವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದಾರೆ. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ತಾರಕರತ್ನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಟಿಡಿಪಿ ಮುಖಂಡರು ತಿಳಿಸಿದ್ದಾರೆ.
ತಾರಕರತ್ನ ಅವರಿಗೆ ಹೃದಯಾಘಾತವಾಗಿದೆ ಎಂದು ಟಿಡಿಪಿ ಮುಖಂಡ ಗೋರಂಟ್ಲಾ ಬುಚ್ಚಯ್ಯ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೈದ್ಯರು ಆಂಜಿಯೋಗ್ರಾಮ್ ಮಾಡಿದ್ದು, ಈಗ ತೊಂದರೆ ಇಲ್ಲ. ವೈದ್ಯರು ಕಾಲಕಾಲಕ್ಕೆ ಅವರ ಮೇಲೆ ನಿಗಾ ಇಡುತ್ತಿದ್ದಾರೆ. ತಾರಕ್ ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದರು. ಇದರೊಂದಿಗೆ ತಾರಕರತ್ನ ಅಭಿಮಾನಿಗಳು ಮತ್ತು ಟಿಡಿಪಿ ಅಭಿಮಾನಿಗಳು ನಟ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.