ಹೊಸದಿಗಂತ ವರದಿ ವಿಜಯಪುರ:
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಶಿಕ್ಷಕನನ್ನು ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2012 ರಿಂದ 2014ರ ಅವಧಿಯಲ್ಲಿ ಅಕ್ರಮ ಶಿಕ್ಷಕನಾಗಿ ನೇಮಕವಾಗಿರುವ ಆರೋಪ ಹಿನ್ನೆಲೆ ಶಿಕ್ಷಕ ಅಶೋಕ ಚವ್ಹಾಣ ಈತನನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಸಿಒಡಿ ಅಧಿಕಾರಿಗಳ ಸೂಚನೆ ಮೇರೆಗೆ ಕಲಬುರಗಿ ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದೆ.