ಶಿಕ್ಷಕರ ನೇಮಕಾತಿ ಹಗರಣ: ಜಿಲ್ಲೆಯ ಶಿಕ್ಷಕ ಸಿಒಡಿ ವಶಕ್ಕೆ

ಹೊಸದಿಗಂತ ವರದಿ ವಿಜಯಪುರ:

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಶಿಕ್ಷಕನನ್ನು ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

2012 ರಿಂದ 2014ರ ಅವಧಿಯಲ್ಲಿ ಅಕ್ರಮ ಶಿಕ್ಷಕನಾಗಿ ನೇಮಕವಾಗಿರುವ ಆರೋಪ ಹಿನ್ನೆಲೆ ಶಿಕ್ಷಕ ಅಶೋಕ ಚವ್ಹಾಣ ಈತನನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಸಿಒಡಿ ಅಧಿಕಾರಿಗಳ ಸೂಚನೆ ಮೇರೆಗೆ ಕಲಬುರಗಿ ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!