ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ಭಕ್ತರಾಗಿರುವ ಚೆನ್ನೈನ ಉದ್ಯಮಿ ಅಬ್ದುಲ್ ಘನಿ, ದೇವಾಲಯಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಪತ್ನಿ ಸುಬೀನಾ ಬಾನು ಹಾಗೂ ಮಕ್ಕಳೊಡನೆ ತಿರುಪತಿಗೆ ಬಂದು, 1.02ಕೋಟಿ ರೂ. ದೇಣಿಗೆ ನೀಡಿದ್ದಾರೆ. ದೇವಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳಿಗೆ 75 ಲಕ್ಷ ರೂ. ಹಾಗೂ ಎಸ್.ವಿ. ಅನ್ನಪ್ರಸಾದಂ ಟ್ರಸ್ಟ್ಗೆ 15 ಲಕ್ಷ ಒದಗಿಸಿದರು.
ಈ ಬಗ್ಗೆ ಅಬ್ದುಲ್ ಘನಿ ಮಾತನಾಡಿದ್ದು, ವೆಂಕಟೇಶ್ವರ, ಅಲ್ಲಾ, ಏಸು ಎಲ್ಲರೂ ಒಂದೇ ಎಂದು ನಾನು ನಂಬಿದ್ದೇನೆ. 25 ವರ್ಷದಿಂದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದೇನೆ, ನಾನು ತಿಮ್ಮಪ್ಪನ ಭಕ್ತ ಎಂದು ಹೇಳಿದ್ದಾರೆ.
A Chennai-based couple Subeena Banu & Abdul Ghani donated Rs 1 cr to Tirumala Tirupati Devasthanams
The donation includes Rs 87 lakh worth of furniture & utensils for the newly constructed Padmavathi Rest House & a DD for Rs 15 lakh towards SV Anna Prasadam Trust (20.09) pic.twitter.com/jdZBfYyJAb— ANI (@ANI) September 20, 2022