ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಶಾಂತನು ಬ್ಯಾನರ್ಜಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಾಂತನು ಬ್ಯಾನರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

ಸತತ 7 ಗಂಟೆಗಳ ವಿಚಾರಣೆಯ ನಂತರ ಇಡಿ ಅಧಿಕಾರಿಗಳು ಶಾಂತನು ಅವರನ್ನು ಬಂಧಿಸಿದ್ದಾರೆ.

ಇಡಿ ಯ ಕೋಲ್ಕತ್ತಾ ಕಚೇರಿಯು ಶಾಂತನು ಬಂಧನದ ಬಗ್ಗೆ ದೆಹಲಿಯ ಪ್ರಧಾನ ಕಚೇರಿ ಸಂಪರ್ಕಿಸಿದ ನಂತರ ಈ ಬೆಳವಣಿಗೆ ನಡೆದಿದೆ.ಶಾಂತನು ಅವರ ಮನೆಯಲ್ಲಿ 300 ಶಿಕ್ಷಕರ ಅಭ್ಯರ್ಥಿಗಳ ಪಟ್ಟಿ ಪತ್ತೆಯಾಗಿದ್ದು, ಈ ಸಂಬಂಧ ಅವರನ್ನು ಪ್ರಶ್ನಿಸಲಾಗಿದೆ. ಶಾತನು ಹಣದ ವಹಿವಾಟು ನಡೆಸಿದ ಮಾಹಿತಿ ಬಗ್ಗೆಯೂ ಕೇಳಲಾಗಿದೆ,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!