ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡರು ಭಾರತ ವಿರುದ್ದದ ತನ್ನ ಹೇಳಿಕೆಯನ್ನು ನಿಲ್ಲಿಸಿದ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಮತ್ತೆ ಹೇಳಿಕೆ ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಗಳ ಜತೆ ಮಾತನಾಡಿದ ಅವರು ಭಾರತ ತಂಡವನ್ನು ಪದೇ ಪದೆ ಸೋಲಿಸಬೇಕು ಹಾಗೂ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸಬೇಕು ಎಂಬುದಾಗಿ ಬಾಬರ್ ಅಜಮ್ ಪಡೆಗೆ ಕರೆ ಕೊಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ತಾನು ವಿಶ್ವದ ಸೂಪರ್ ಪವರ್ ಎಂಬ ಭ್ರಮೆ ಇದೆ. ಅದನ್ನು ಹೋಗಲಾಡಿಸಬೇಕಾದರೆ ಅವರನ್ನು ಆಗಾಗ ಸೋಲಿಸುತ್ತಿರಬೇಕು. ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ. ಇದರಿಂದ ಅವರ ಅಹಂಕಾರ ಕಡಿಮೆಯಾಗಿದೆ. ಮುಂದೆಯೂ ಅವಕಾಶ ಸಿಕ್ಕಾಗ ಸೋಲಿಸುತ್ತಿರಬೇಕು ಎಂಬದಾಗಿ ರಮೀಜ್ ಹೇಳಿದ್ದಾರೆ.
ತಾನು ದೊಡ್ಡವನು ಎಂಬ ಭ್ರಮೆಯಿಂದಲೇ ಬಿಸಿಸಿಐ ತನಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದೆ. ಏಷ್ಯಾ ಕಪ್ ಅನ್ನು ಪಾಕಿಸ್ತಾನ ಬಿಟ್ಟು ಬೇರೆ ಕಡೆಯಲ್ಲಿ ನಡೆಸುವುದಾಗಿ ಹೇಳುತ್ತಿದೆ.ಈ ಮಾದರಿಯ ವರ್ತನೆಗಳನ್ನು ನಿಲ್ಲಿಸಬೇಕಾದರೆ ಭಾರತ ತಂಡವನ್ನು ನಿರಂತರವಾಗಿ ಸೋಲಿಸುತ್ತಿರಬೇಕು ಎಂದು ಹೇಳಿದರು.