ವರುಣಾರ್ಭಟಕ್ಕೆ ತೆಲಂಗಾಣ ತತ್ತರ: ಭಾರೀ ಜಲಪ್ರವಾಹದಿಂದ 5,438 ಕೋಟಿ ರೂ. ನಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ಸರ್ಕಾರವು ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದೆ.

ಆರಂಭಿಕ ಅಂದಾಜಿನ ಪ್ರಕಾರ, ಸೋಮವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ಒಟ್ಟು ನಷ್ಟ 5438 ಕೋಟಿ ರೂ. ಎಂದು ಹೇಳಲಾಗಿದೆ.

ರಸ್ತೆ ಮತ್ತು ಕಟ್ಟಡ ಇಲಾಖೆ-2,362 ಕೋಟಿ ಎಂದು ಅಂದಾಜಿಸಲಾಗಿದೆ. ಇಂಧನ ಇಲಾಖೆ (ವಿದ್ಯುತ್ ಅಳವಡಿಕೆಗೆ ಹಾನಿ) 175 ಕೋಟಿ ರೂ., ಬೆಳೆ ನಷ್ಟ (415000 ಎಕರೆಯಲ್ಲಿ) – 415 ಕೋಟಿ ರೂ., ನೀರಾವರಿ (ಮೈನರ್ ಟ್ಯಾಂಕ್‌ಗಳ ದುರಸ್ತಿ) – 629 ಕೋಟಿ ರೂ. ಅಲ್ಲದೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಗೆ 170 ಕೋಟಿ ರೂ., ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ 12 ಕೋಟಿ ರೂ., ಪಶುಸಂಗೋಪನಾ ಇಲಾಖೆಗೆ ರೂ. 25 ಕೋಟಿ, ಪೌರಾಡಳಿತಕ್ಕೆ 1150 ಕೋಟಿ ರೂ., ಹಾನಿಯಾಗಿದೆ. ಸಾರ್ವಜನಿಕ ಆಸ್ತಿಗಳ ಅಂದಾಜು 500 ಕೋಟಿ ರೂ. 110 ಪರಿಹಾರ ಶಿಬಿರಗಳನ್ನು ಆಯೋಜಿಸಲಾಗಿದ್ದು, 4000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಈ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಈ ನಡುವೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೆಲಂಗಾಣದ ಖಮ್ಮಂನ ಪ್ರಕಾಶ್ ನಗರದಲ್ಲಿ ಮುನ್ನೇರು ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿದೆ ಎಂದು ಖಮ್ಮಂನ ಕಾಂಗ್ರೆಸ್ ಸಂಸದ ರಾಮಸಹಾಯ ರಘುರಾಮ ರೆಡ್ಡಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!