ವಿದ್ಯಾರ್ಥಿ ಮೇಲೆ ವಾರ್ಡನ್ ಹಲ್ಲೆ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೃತ್ಯ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಗಿತ್ತಾಲ ಜಿಲ್ಲೆಯ ಕೋರುಟ್ಲ ಅಲ್ಪಸಂಖ್ಯಾತರ ಗುರುಕುಲ ಕಾಲೇಜಿನಲ್ಲಿ ಡೆಪ್ಯುಟಿ ವಾರ್ಡನ್ ಪಿಯುಸಿ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಒಂದು ವಾರದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಪ ವಾರ್ಡನ್ ನಯೀಮ್ ಪಿಯುಸಿ ವಿದ್ಯಾರ್ಥಿ ರಾಜುವಿಗೆ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಓದುವ ಸಮಯದಲ್ಲಿ ಹೊರಗೆ ಹೋಗಿದ್ದೀಯಾ ಎಂದು ವಾರ್ಡನ್ ವಿದ್ಯಾರ್ಥಿಯನ್ನು ಕೆಳಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದಾನೆ. ವಿದ್ಯಾರ್ಥಿ ನಾನು ರೂಂನಲ್ಲಿ ಇದ್ದೆ ಸರ್‌ ಎಂದು ಎಷ್ಟೇ ಬೇಡಿಕೊಂಡರೂ ಕರುಣೆ ತೋರದೆ ಅಂಗಿ ಹಿಡಿದು ಎಳೆದೊಯಿದ್ದಾನೆ. ವಿಷಯ ತಿಳಿದ ಪ್ರಾದೇಶಿಕ ಮಟ್ಟದ ಸಮನ್ವಯಾಧಿಕಾರಿ ಸೈಯದ್ ಹಮೀದ್ ತನಿಖೆಗೆ ಆದೇಶಿಸಿದ್ದಾರೆ. ಉಪ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ. ಮೇಲಾಧಿಕಾರಿಗಳ ಆದೇಶದ ಮೇರೆಗೆ ತನಿಖೆ ನಡೆಸಿ ವಾರ್ಡನ್‌ ಅನ್ನು ಸಸ್ಪೆಂಡ್‌ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!