ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನಿಯರ್ ಎನ್ಟಿಆರ್ ರಾಜಕೀಯಕ್ಕೆ ಬರಲು ಬರಬೇಕು, ಟಿಡಿಪಿಯನ್ನು ಕೈವಶ ಮಾಡಿಕೊಳ್ಳಬೇಕು ಎಂದು ತೆಲುಗು ಅಕಾಡೆಮಿ ಅಧ್ಯಕ್ಷೆ ಲಕ್ಷ್ಮಿ ಪಾರ್ವತಿ ಅಭಿಪ್ರಾಯಪಟ್ಟಿದ್ದಾರೆ. ಜೂನಿಯರ್ ಎನ್.ಟಿ.ಆರ್. ರಾಜಕೀಯಕ್ಕೆ ಬರಲು ಬಯಸಿದವರಲ್ಲಿ ನಾನೇ ಮೊದಲಿಗಳು ಎಂದು ಹೇಳಿದ ಆಕೆ ಅವರ ಮೇಲೆ ನನ್ನ ಆಶೀರ್ವಾದ ಸದಾ ಇರುತ್ತದೆ ಎಂದರು.
ತೆಲುಗು ಅಕಾಡೆಮಿಯ ವ್ಯವಹಾರಗಳ ಕುರಿತು ತಿರುಪತಿಯಲ್ಲಿ ಪ್ರೆಸ್ಮೀಟ್ ನಡೆಸಿದ ಬಳಿಕ ಮಾತನಾಡಿದ ಅವರು, ಜೂನಿಯರ್ ಎನ್ ಟಿಆರ್-ಅಮಿತ್ ಶಾ ಭೇಟಿ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಜೂನಿಯರ್ ಎನ್ಟಿಆರ್ ರಾಜಕೀಯಕ್ಕೆ ಬರಬೇಕು ಎಂದು ಬಯಸುವವರಲ್ಲಿ ನಾನೂ ಒಬ್ಬ ಎಂದು ಹೇಳಿದರು.
ಜೂನಿಯರ್ ಎನ್ ಟಿಆರ್ ಟಿಡಿಪಿ ಅಧಿಕಾರ ವಹಿಸಿಕೊಳ್ಳಬೇಕೆಂದು ಬೇಡಿಕೆ ಇದೆ ಇದಕ್ಕೆ ನನ್ನ ಸಮ್ಮತಿಯೂ ಇದೆ ಎಂದು ಲಕ್ಷ್ಮೀ ಪಾರ್ವತಿ ತಿಳಿಸಿದ್ದಾರೆ. ಆದರೆ, ಜೂನಿಯರ್ ಎನ್ ಟಿಆರ್-ಅಮಿತ್ ಶಾ ಭೇಟಿಯಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತನಾಡಲು ಲಕ್ಷ್ಮಿ ಪಾರ್ವತಿ ನಿರಾಕರಿಸಿದ್ದಾರೆ.