ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಸಮೀಪ ಎರಡು ಕಾಡಾನೆಗಳ ನಡುವೆ ನಡೆದ ಭೀಕರ ಕಾಳಗದ ಪರಿಣಾಮವಾಗಿ ಪೈಪ್ ಒಡೆದು ಅಡಿಕೆ ತೋಟದಲ್ಲಿದ್ದ ಕೆಲ ಗಿಡಗಳು ನಾಶವಾಗಿರುವ ಘಟನೆ ನಡೆದಿದೆ.
ಕಡೆಗರ್ಜೆ ಗ್ರಾಮದ ಬಳಿ ಎರಡು ಆನೆಗಳು ಭೀಕರ ಕಾಳಗ ನಡೆಸಿವೆ. ನಂತರ ಮನೆಗೆ ಸಂಪರ್ಕ ಹೊಂದಿದ ನೀರಿನ ಪೈಪ್ ನಾಶವಾಗಿದೆ. ಅಡಿಕೆ ತೋಟ, ಕೆಲವು ಸಸ್ಯಗಳ ನಾಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಪ್ರಾಣಿಗಳು ಜನರ ಬಳಿಗೆ ಬರದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.