ಅಹಮದಾಬಾದ್​ನಲ್ಲಿ ಅಂತಿಮ ಟೆಸ್ಟ್​: ಭಾರತಕ್ಕೆ ಗೆಲುವು ಅನಿವಾರ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಅಂತಿಮ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಸರಣಿ ಸಮಬಲದ ಸಾಧನೆಯತ್ತ ಕಾಂಗರೂ ಪಡೆಯ ಚಿತ್ತ ನೆಟ್ಟಿದೆ.

ವಿಶ್ವ ಟೆಸ್ಟ್​ ಚಾಂಪಿನಯನ್​ಶಿಪ್​ ಫೈನಲ್​ ಪ್ರವೇಶಕ್ಕೆ ಆಸಿಸ್​ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯದ ಗೆಲುವು ಭಾರತಕ್ಕೆ ಅಗತ್ಯವಾಗಿದೆ.

ಸ್ಮಿತ್​ ನಾಯಕತ್ವದಲ್ಲಿ ಇಂದೋರ್​ನ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ ಮೊರನೇ ಟೆಸ್ಟ್​ನ್ನು ಆಸಿಸ್​ ಗೆದ್ದುಕೊಂಡಿದೆ. ನಾಲ್ಕನೇ ಟೆಸ್ಟ್​ಗೂ ನಾಯಕ ಪ್ಯಾಟ್​ ಕಮಿನ್ಸ್​ ಅನುಪಸ್ಥಿತಿ ಇದ್ದು, ನಾಯಕತ್ವದ ಹೊಣೆ ಸ್ಟೀವ್​ ಸ್ಮಿತ್​ ಹೆಗಲ ಮೇಲೆಯೇ ಇದೆ. ಮೂರನೇ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದ ಸ್ಮಿತ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ.

ಟೆಸ್ಟ್​ ಚಾಂಪಿಯನ್​ ಶಿಪ್​ಗೆ ಆಯ್ಕೆಗೆ ಗೆಲುವು ಅನಿವಾರ್ಯ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಕ್ಕೆ ಭಾರತ ಈ ಟೆಸ್ಟ್​ ಪಂದ್ಯದಲ್ಲಿ ಗೆಲ್ಲಬೇಕಿದೆ. ಇಲ್ಲದಿದ್ದಲ್ಲಿ ಶ್ರೀಲಂಕಾ ಫೈನಲ್​ಗೆ ಹೋಗುವ ಅವಕಾಶ ಮಾಡಿಕೊಳ್ಳುವ ಸಾಧ್ಯತೆ ಇದೆ. ನಾಳೆಯಿಂದ ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಶ್ರೀಲಂಕಾಗೆ ಪಂದ್ಯ ಆರಂಭವಾಗಲಿದೆ. ಎರಡು ಟೆಸ್ಟ್​ ಪಂದ್ಯದ ಸರಣಿಯಲ್ಲಿ ಕಿವಿಸ್​ನ್ನು ತವರಿನಲ್ಲಿ ಕ್ಲೀನ್​ ಸ್ವೀಪ್​ ಮಾಡಿದರೆ ಲಂಕಾ WTC ಫೈನಲ್​ ಪ್ರವೇಶಿಸಲಿದೆ.

ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ: ಈ ಟೆಸ್ಟ್​ ಸರಣಿಯಲ್ಲಿ ಪದಾರ್ಪಣೆ ಮಾಡಿದ ವಿಕೆಟ್​ ಕೀಪರ್​ ಕೆಎಸ್​ ಭರತ್ ಅವರನ್ನು ತಂಡದಿಂದ ಕೈಬಿಟ್ಟು ಇಶನ್​ ಕಿಶನ್​ಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಏಕದಿನ ಮತ್ತು ಟಿ20ಯಲ್ಲಿ ತಮ್ಮ ಫಾರ್ಮ್​ನ್ನು ತೋರಿರುವ ಕಿಶನ್​ ಅಂತಿಮ ಟೆಸ್ಟ್​ನಲ್ಲಿ ಡೆಬ್ಯೂ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!