ಬಿಸಿಲನ್ನೂ ಲೆಕ್ಕಿಸದೆ ಹಕ್ಕು ಚಲಾಯಿಸಿ ಮತದಾರರನ್ನು ಹುರಿದುಂಬಿಸಿದ ಉಡುಪಿಯ ಅಷ್ಟಮಠಾಧೀಶರು!

ಹೊಸ ದಿಗಂತ ಮಂಗಳೂರು:

ಪೊಡವಿಗೊಡೆಯನ ನಾಡು ಉಡುಪಿಯಲ್ಲಿ ಲೋಕಸಭಾ ಚುನಾವಣೆ ಕಳೆಗಟ್ಟಿದ್ದು, ಉಡುಪಿಯ ಅಷ್ಟ ಮಠಾಧೀಶರು ತಮ್ಮ ಹಕ್ಕು ಚಲಾಯಿಸಿ ಮತದಾರರನ್ನು ಹುರಿದುಂಬಿಸಿದ್ದಾರೆ.

ಹೊತ್ತೇರುತ್ತಿರುವಂತೆಯೇ ಬಿಸಲಿನ ಝಳವೂ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಬಿಸಿಲನ್ನೂ ಲೆಕ್ಕಿಸದೆ ಮತದಾರ ಮತಚಲಾಯಿಸಲು ಆಗಮಿಸುತ್ತಿರುವುದು ಕಂಡುಬರುತ್ತಿದೆ. ಉಡುಪಿ ಜಿಲ್ಲೆಯ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರಿಗೆ, ವಿಕಲ ಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!