CRIME | ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ಶವ ಪತ್ತೆ! ಇದು ಕೊಲೆಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮಾಣಿಕ್ಯನಹಳ್ಳಿ ಗ್ರಾಮದ ಶಿಕ್ಷಕಿಯಾದ ದೀಪಿಕಾರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ದೀಪಿಕಾ ಶಾಲೆಗೆ ಹೋದವರು ವಾಪಾಸ್ ಬರದೇ ಇದ್ದ ಕಾರಣ ಕುಟುಂಬದವರು ಆತಂಕಕ್ಕೀಡಾಗಿದ್ದಾರೆ. ಅವರನ್ನು ಹುಡುಕುತ್ತಾ ಹೋದಾಗ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಸ್ಕೂಟಿ ಕಾಣಿಸಿದೆ. ಅಲ್ಲೇ ಸುತ್ತಮುತ್ತ ಹುಟುಕಾಟ ನಡೆಸಿದಾಗ ಮಣ್ಣಿನಲ್ಲಿ ಹೂತಿದ್ದ ದೀಪಿಕಾ ಮೃತದೇಹ ಕಾಣಿಸಿದೆ.

ಇದೇ ಊರಿನ ಯುವಕೊಬ್ಬ ಕೊಲೆ ಮಾಡಿರಬಹುದು ಎಂದು ದೀಪಿಕಾ ಪೋಷಕರು ದೂರಿದ್ದಾರೆ. ಯುವಕ ಅಕ್ಕ ಎನ್ನುತ್ತಲೇ ಸಲುಗೆಯಿಂದ ದೀಪಿಕಾ ಬಳಿ ಮಾತನಾಡುತ್ತಿದ್ದ. ದೀಪಿಕಾ ಫೋನ್‌ನಲ್ಲಿ ಕಡೆಯ ಕರೆಯೂ ಅದೇ ಯುವಕನದ್ದಾಗಿದೆ. ಮೃತದೇಹ ಸಿಕ್ಕಾಗಿನಿಂದ ಯುವಕ ಕಾಣೆಯಾಗಿದ್ದಾನೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ಯುವಕನ ಮಧ್ಯೆ ಜಗಳವಾಗಿದೆ. ಇದನ್ನು ಅಲ್ಲೇ ಇದ್ದ ಪ್ರವಾಸಿಗರು ವಿಡಿಯೋ ಮಾಡಿದ್ದು, ಪೊಲೀಸರಿಗೆ ತಲುಪಿಸಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!