ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಬೆಂಗಳೂರು ನಿವಾಸಿಗಳಿಗೆ ಸೂರ್ಯನ ದರ್ಶನವೇ ಇಲ್ಲದಂತಾಗಿದೆ.
ಚಳಿ ಗಾಳಿ, ಮಳೆ ಇನ್ನೂ ನಾಲ್ಕು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಧಾರಾಕಾರವಾಗಿ ಸುರಿದ ಮಳೆ ಮಧ್ಯರಾತ್ರಿ ನಿಂತುಹೋಗಿದ್ದು, ರಸ್ತೆಗಳೆಲ್ಲ ನೀರಿನ ಹೊಂಡವಾಗಿದೆ. ಬೆಳಗ್ಗೆ ಮತ್ತೆ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಬೈಕ್ಗಳಲ್ಲಿ ಕೆಲಸಕ್ಕೆ ತೆರಳುವವರಿಗೆ ಕಿರಿಕಿರಿ ಉಂಟಾಗಿದೆ.
ರಾಜಧಾನಿ ವಾತಾವರಣ ಮಡಿಕೇರಿಯಂತಾಗಿದ್ದು, ಹೊರಗೆ ಬಂದರೆ ವೆದರ್ ಕೂಲ್ ಎನಿಸುವಂತಾಗಿದೆ. ಒಟ್ಟಾರೆ ಇನ್ನೂ ನಾಲ್ಕು ದಿನ ಇದೇ ಪರಿಸ್ಥಿತಿಯನ್ನು ಬೆಂಗಳೂರಿಗರು ಅನುಭವಿಸಬೇಕಿದೆ.