ದೇಶ ಬದಲಾವಣೆ ಬಯಸುತ್ತಿದೆ, ಬರೀ ಘೋಷಣೆ ಸರ್ಕಾರ ಯಾರಿಗೂ ಬೇಡ: ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶ ಬದಲಾವಣೆ ಬಯಸುತ್ತಿದೆ. ಬರೀ ಘೋಷಣೆಗಳ ಸರ್ಕಾರ ಯಾರಿಗೂ ಬೇಡ, ಕೆಲಸ ಮಾಡುವ ಸರ್ಕಾರ ಬೇಕು. ಜನರಿಗೆ ಬೇಕಿರುವ ಕೆಲಸ ಮಾಡಲು ನಮ್ಮಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದ ಸಭೆಯಲ್ಲಿ ಮಾತನಾಡಿ, ದೇಶಾದ್ಯಂತ ಪ್ರತೀ ಹಳ್ಳಿಯ ಮನೆಮನೆಗೂ ನಮ್ಮ ಬದ್ಧತೆಗಳನ್ನು, ಪ್ರಣಾಳಿಕೆಗಳನ್ನು ತಲುಪಿಸುತ್ತೇವೆ. ಪ್ರಣಾಳಿಕೆಯಲ್ಲಿ ಇರುವ ಎಲ್ಲ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಶ್ಲಾಘಿಸಿದ ಖರ್ಗೆ, ಈ ಮೂಲಕ ಜನರ ನಿಜವಾದ ಸಮಸ್ಯೆಯತ್ತ ದೇಶದ ಗಮನವನ್ನು ಸೆಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ ಎಂದು ಹೇಳಿದರು.

ಇವುಗಳು ಕೇವಲ ರಾಜಕೀಯ ಯಾತ್ರೆಗಳಾಗಿರಲಿಲ್ಲ, ಆದರೆ ನಮ್ಮ ರಾಜಕೀಯ ಇತಿಹಾಸದಲ್ಲಿ ಅತಿದೊಡ್ಡ ಜನಸಂಪರ್ಕ ಆಂದೋಲನಕ್ಕಾಗಿ ಗುರುತಿಸಲ್ಪಡುತ್ತವೆ. ನಮ್ಮ ಕಾಲದಲ್ಲಿ ಯಾರೂ ಇಂತಹ ಬೃಹತ್ ಕಸರತ್ತನ್ನು ಕೈಗೊಂಡಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!