ಡಿ.11 ರಂದು ‘ದಿ ಡಿಜೆ’ ಪುಸ್ತಕ ಬಿಡುಗಡೆ ಸಮಾರಂಭ

ಹೊಸದಿಗಂತ ವರದಿ ಹುಬ್ಬಳ್ಳಿ:

‘ದಿ ಡಿಜೆ’ ಪುಸ್ತಕ ಬಿಡುಗಡೆ ಸಮಾರಂಭ ವಿದ್ಯಾನಗರದ ಸಿದ್ದೇಶ್ವರ ಪಾರ್ಕ್ ನ ಸೆಂಟ್ ಅಂಥೋನಿ ಸ್ಕೂಲ್ ನಲ್ಲಿ ಡಿ.11 ರಂದು ಸಂಜೆ 4 ಕ್ಕೆ ನಡೆಯಲಿದೆ ಎಂದು ಜೆನ್ನಿಫರ್ ಫೀಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕ ವಿ. ಮನೋಹರ, ನಟ ಸುನೀಲ ಪುರಾಣಿಕ, ಡಾ. ಕೆ.ಎ. ಪ್ರಸಾದ ಪಾಲ್ಗೊಳ್ಳುವರು ಎಂದರು.

ವಿಶೇಷ ಅತಿಥಿಗಳಾಗಿ ಎಚ್.ಎಸ್. ಕಿರಣ, ಬಸವರಾಜ ಕುಂಬಾರ, ಅಶೋಕ ಕವೇತಿ, ಶಿವಕುಮಾರ ಹಿಪ್ಪರಗಿ ಭಾಗವಹಿಸುವರು. ಪುಸ್ತಕವು ಸಂಬಂಧಗಳಲ್ಲಿ ಆರೋಗ್ಯಕರ ಬಾಂಧವ್ಯವನ್ನು ನಿರ್ಮಿಸಲು ಪ್ರೀತಿ, ವಿಶ್ವಾಸ, ಗೌರವ ಈ ಮೂರು ಪ್ರಮುಖ ವಿಷಯಗಳಾಗಿದ್ದು, ಸಂಬಂಧಗಳನ್ನು ಯಾವ ರೀತಿ ಬೆಸೆಯಬೇಕು ಎಂಬ ವಿಷಯವನ್ನೊಳಗೊಂಡಿದೆ ಎಂದು ಹೇಳಿದರು. ಪುಸ್ತಕವನ್ನು ರೈಟರ್ಸ್ ಗ್ರಾಮ್ ಪಬ್ಲಿಕೇಶನ್ ಚೆನೈ ಪ್ರಕಾಶನ ಗೊಳಿಸಿದ್ದಾರೆ. ಈ ಪುಸ್ತವು ಆಂಗ್ಲ ಭಾಷೆಯಲ್ಲಿದೆ ಎಂದರು. ಎಚ್.ಎಸ್.ಕಿರಣ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!