ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೊದಲು ರಶ್ಮಿಕಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನುವ ಸುದ್ದಿಯಷ್ಟೇ ಹೊರಬಿದ್ದಿತ್ತು. ಇದರಿಂದ ಅಭಿಮಾನಿಗಳು ಗಾಬರಿಯಾಗಿದ್ದು, ವೈದ್ಯರು ರಶ್ಮಿಕಾ ಆರಾಮಾಗಿ ಇದ್ದಾರೆ ಎಂದು ತಿಳಿಸಲು ಫನ್ನಿಯಾದ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಹೈದರಾಬಾದ್ನ ಆರ್ಥೋ ಸ್ಪೆಶಲಿಸ್ಟ್ ಗುರುವಾ ರೆಡ್ಡಿ ರಶ್ಮಿಕಾ ಜೊತೆಗಿನ ಫೋಟೊ ಪೋಸ್ಟ್ ಮಾಡಿ, ಸಾಮಿ, ಸಾಮಿ ಎಂದು ಮೊಣಕಾಲಿನ ಮೇಲೆ ಭಾರ ಹಾಕಿ ಡ್ಯಾನ್ಸ್ ಮಾಡಿದ್ದೀರಿ, ಅದಕ್ಕೆ ನೋವು ಬಂದಿದೆ, ನೋವಿದೆ ಹಾಗಾಗಿ ನನ್ನ ಬಳಿ ಬಂದಿದ್ದೀರಿ ಶ್ರೀವಲ್ಲಿ ಎಂದು ಹೇಳಿದ್ದಾರೆ.