ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಒತ್ತುವರಿ ತೆರವು ಕಾರ್ಯ ಮತ್ತೆ ಆರಂಭವಾಗಲಿದೆ.
ಬೆಳಗ್ಗೆ ಒಂಬತ್ತರಿಂದ ತೆರವು ಕಾರ್ಯ ಆರಂಭವಾಗಲಿದ್ದು, ಬುಲ್ಡೋಜರ್ಗಳು ಕಾರ್ಯಪ್ರವೃತ್ತವಾಗಲಿದೆ. ಬೆಂಗಳೂರಿನ ಮಹದೇವಪುರ ಹಾಗೂ ಕೆ.ಆರ್. ಪುರಂನಲ್ಲಿ ತೆರವು ಕಾರ್ಯ ನಡೆಯಲಿದೆ.
ಒತ್ತುವರಿ ತೆರವುದಾರರಿಗೆ ಪಾಲಿಕೆ ಶಾಕ್ ನೀಡಿದ್ದು, ಈಗಾಗಲೇ 571 ಭಾಗಗಳಲ್ಲಿ ಅಕ್ರಮ ಒತ್ತುವರಿ ವರದಿ ತಯಾರಿಸಿದೆ. ಕೆ.ಆರ್. ಪುರಂನ ಹೊರಮಾವು ಭಾಗದ ಹೊಯ್ಸಳ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆಯಲಿದೆ, ಇಲ್ಲಿ ಅಂಗಡಿ, ಮಳಿಗೆಗಳು ನಿರ್ಮಾಣವಾಗಿದ್ದು, ಅವುಗಳನ್ನು ತೆರವು ಮಾಡಲಾಗುತ್ತದೆ. ಮಹಾದೇವಪುರದಲ್ಲಿ ಅನಧಿಕೃತವಾಗಿ ಪಿ.ಜಿ. ಕಟ್ಟಡದ ಕಾಂಪೌಂಡ್ ನಿರ್ಮಿಸಲಾಗಿದ್ದು, ಇದನ್ನು ತೆರವು ಮಾಡಲಾಗುವುದು.