ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಮತೀಯ ಕಾರಣದಿಂದ ಬಲಿಯಾದ ನಾಲ್ವರು ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.
2018ರ ಜನವರಿಯಲ್ಲಿ ಕಾಟಿಪಳ್ಳದ ದೀಪಕ್ ರಾವ್, 2022ರ ಜುಲೈ 19ರಂದು ಬೆಳ್ಳಾರೆಯ ಮಸೂದ್, 2022ರ ಮಂಗಳಪೇಟೆಯ ಮಹಮ್ಮದ್ ಫಾಝಿಲ್, ಕಳೆದ ಡಿಸೆಂಬರ್ನಲ್ಲಿ ಕಾಟಿಪಳ್ಳದ ಅಬ್ದುಲ್ ಜಲೀಲ್ ಎನ್ನುವವರನ್ನು ದುಷ್ಕರ್ಮಿಗಳು ಕೊಂದಿದ್ದರು. ಇದೆಲ್ಲವೂ ಕೋಮುದ್ವೇಷಕ್ಕೆ ಆದ ಕೊಲೆಗಳಾಗಿವೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಹಣ ನೀಡಲಾಗುತ್ತಿದೆ. ಇದೇ ಜೂ.19ರಂದು ಪರಿಹಾರ ಧನದ ಚೆಕ್ ಮೃತರ ಕುಟುಂಬದ ಕೈಸೇರಲಿದೆ.