ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ಸಿನ ಮಧ್ಯಾವಧಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಗುರುವಾರ ಮಂಡ್ಯದಲ್ಲಿ ಕಾಂಗ್ರೆಸ್ಸಿನ ಭಾರತ ಜೋಡೊ ಯಾತ್ರೆಗೆ ಜತೆಯಾಗಿದ್ದಾರೆ.
ಎರಡು ದಿನಗಳ ದಸರಾ ವಿಶ್ರಾಂತಿ ತೆಗೆದುಕೊಂಡಿದ್ದ ಭಾರತ ಜೋಡೊ ಯಾತ್ರೆ ಗುರುವಾರ ಪುನಾರಂಭವಾಗುತ್ತಲೇ ಸೋನಿಯಾ ಗಾಂಧಿ ಅವರು ಬೇಗೂರಿನ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆಯಲ್ಲಿ ಜತೆಯಾದರು.
ಸಹಜವಾಗಿಯೇ ಕರ್ನಾಟಕ ಕಾಂಗ್ರೆಸ್ ಉತ್ಸಾಹ ತಾರಕಕ್ಕೇರಿದ್ದು, ಈ ಹಿಂದೆ ಬಳ್ಳಾರಿಯಿಂದ ಸೋನಿಯಾಗಾಂಧಿ ಗೆದ್ದಿದ್ದನ್ನು ನೆನಪಿಸುತ್ತ, ಈಗಲೂ ಕಾಂಗ್ರೆಸ್ ಪುನರುತ್ಥಾನ ಕರ್ನಾಟಕದ ನೆಲದಿಂದಲೇ ಆಗಲಿದೆ ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಪಕ್ಷವು ಟ್ವೀಟ್ ಮಾಡಿದೆ.
“ಎಲ್ಲ ಪಕ್ಷದ ನಾಯಕರೂ ಅವರವರ ಪಕ್ಷದ ಉನ್ನತಿಗೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅವರ ಕರ್ನಾಟಕ ಭೇಟಿ ತಮ್ಮ ಪಕ್ಷದ ಮೇಲೇನೂ ಪ್ರಭಾವ ಬೀರುವುದಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.