ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆ ಎಷ್ಟುಸಲ ವಿರೋಧಿಸಿದರೂ ಕೇಳದೇ ತ್ನ ಪ್ರಿಯಕರನೊಂದಿಗಡ ಸಂಬಂಧವಿರಿಸಿಕೊಂಡಿದ್ದಕ್ಕಾಗಿ ಮಗಳ ಮೇಲೆ ಕೋಪಗೊಂಡ ತಂದೆ ಅವಳನ್ನು ಕೊಲ್ಲಲು ಸುಪಾರಿ 1ಲಕ್ಷ ರೂ. ಸುಪಾರಿ ನೀಡಿರುವ ಪ್ರಕರಣ ಲಖ್ನೋದಲ್ಲಿ ವರದಿಯಾಗಿದೆ.
ಅನಾರೋಗ್ಯ ಪೀಡಿತಳಾಗಿದ್ದ ಮಗಳಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚುಮದ್ದು ನೀಡಲು ಅಲ್ಲಿನ ವಾರ್ಡ್ಬಾಯ್ ಗೆ ತಂದೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಹಿಳೆಯ ತಂದೆ ನವೀನ್ ಕುಮಾರ್, ವಾರ್ಡ್ ಬಾಯ್ ನರೇಶ್ ಕುಮಾರ್ ಮತ್ತು ಆಸ್ಪತ್ರೆಯ ಮಹಿಳಾ ಉದ್ಯೋಗಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. .
ನವೀನ್ ಕುಮಾರ್ ಶುಕ್ರವಾರ ತಡರಾತ್ರಿ ತನ್ನ ಮಗಳನ್ನು ಕಂಕರಖೇಡದ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಕೆಲವು ಗಂಟೆಗಳ ನಂತರ ಅವರು ಮೋಡಿಪುರಂನ ಫ್ಯೂಚರ್ ಪ್ಲಸ್ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ರಾತ್ರಿಯಲ್ಲಿ ಹುಡುಗಿಯ ಆರೋಗ್ಯ ಹದಗೆಟ್ಟಿತು. ಪರೀಕ್ಷೆಯಲ್ಲಿ, ವೈದ್ಯರು ಆಕೆಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚಲಾಗಿದೆ ಎಂದು ಕಂಡುಹಿಡಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಚುಚ್ಚುಮದ್ದನ್ನು ನೀಡಿದ ವ್ಯಕ್ತಿಯನ್ನು ನರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ನರೇಶ್ ಕುಮಾರ್, ಮಹಿಳೆಯ ತಂದೆ ತನಗೆ ಕೊಲೆ ಮಾಡಲು 1 ಲಕ್ಷ ರೂಪಾಯಿ ನೀಡಿದ್ದರು ಎಂದು ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.