ಪ್ರತಾಪ್ ಸಿಂಹಗೆ ಸೋಲ್ತೀನಿ ಅನ್ನೋ ಭಯ ಶುರು ಆಗಿದೆ: ಸಿಎಂ ಸಿದ್ದು ವಾಗ್ದಾಳಿ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಪ್ರತಾಪ್ ಸಿಂಹ ಏನಾದ್ರೂ ಹೇಳಲಿ. ಅವನಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ರಾಯಚೂರು ಜಿಲ್ಲೆಯ ತಿಂಥಿಣಿಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಕ್ಷೇತ್ರದ ಯತೀಂದ್ರಗೆ ಪ್ರತಾಪ್ ಸಿಂಹ ಟಿಕೆಟ್ ನೀಡಿರುವ ಕುರಿತು ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಯತೇಂದ್ರ ಅವರಿಗೆ ಟಿಕೆಟ್ ವಿಚಾರ ಇಲ್ಲ. ಮಾತಾಡಿಲ್ಲ. ನಾನೂ ಹೇಳಿಲ್ಲ. ಅಲ್ಲಿಗೆ ವೀಕ್ಷಕರಾಗಿ ಬೈರತಿ ಸುರೇಶ್ ಹೋಗಿದ್ರು. ಅವರ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಮಮಂದಿರ ಲೋಕಾರ್ಪಣೆ ವಿಚಾರವನ್ನು ಉಲ್ಲೇಖಿಸಿದ ಸಿಎಂ, ನಾನು ಅಯೋಧ್ಯೆಗೆ ಎಲ್ಲೂ ಹೋಗುವುದಿಲ್ಲ ಎಂದು ಹೇಳಿಲ್ಲ.

ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪಿಸಲು ನಮ್ಮ ಅಭ್ಯಂತರವಿಲ್ಲ. ಆದ್ರೆ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಕಾರಣ ನಾವು ವಿರೋಧಿಸುತ್ತಿದ್ದೇವೆ. ನಾನು ಹೋಗಲಾರೆ ಎಂದು ಹೇಳಿಲ್ಲ, ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!