ಅರ್ಧ ದಿನ ತಡವಾಗಿ ಬಂತು ವಿಮಾನ, ಪ್ರಯಾಣಿಕರಿಂದ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಣಾಸಿಯಿಂದ ಮುಂಬೈಗೆ ತೆರಳಬೇಕಿದ್ದ ವಿಮಾನ ಅರ್ಧ ದಿನ ತಡವಾಗಿ ಬಂದಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ಮಾಡಿದ್ದಾರೆ.

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿಮಾನ ಬೆಳಗ್ಗೆ 10:30 ಕ್ಕೆ ಟೇಕಾಫ್ ಆಗಿ 12:30 ಕ್ಕೆ ಮುಂಬೈ ತಲುಪಬೇಕಿತ್ತು. ಆದರೆ ವಿಮಾನ ರಾತ್ರಿ 8 ಗಂಟೆಗೆ ವಾರಣಾಸಿಯಿಂದ ಹೊರಟಿದ್ದು, 10:30 ಕ್ಕೆ ಮುಂಬೈ ತಲುಪಿದೆ. ಈ ಕಾರಣಕ್ಕಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ವಿಮಾನದ ಸಮಯ ನಂಬಿಕೊಂಡು ಸಾಕಷ್ಟು ಕೆಲಸ ಇಟ್ಟುಕೊಂಡಿದ್ದೆವು. ನಮಗೆ ನ್ಯಾಯ ಬೇಕು ಎಂದು ಪ್ರಯಾಣಿಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!