ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಿಧನರಾದ ಹಿರಿಯ ಸಾಹಿತಿ , ನಾಡೋಜ ಚೆನ್ನವೀರ ಕಣವಿ (93) ಅವರ ಅಂತ್ಯಕ್ರಿಯೆಯನ್ನು ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್ನಲ್ಲಿ ನಡೆಸಲಾಯಿತು.
ಪೊಲೀಸ್ ಗೌರವದೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಪುತ್ರ ಶಿವಾನಂದ ಕಣವಿ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದು, ಪತ್ನಿ ಶಾಂತಾದೇವಿ ಸಮಾಧಿ ಪಕ್ಕದಲ್ಲೇ ಕಣವಿ ಅಂತ್ಯಕ್ರಿಯೆ ಮಾಡಲಾಗಿದೆ.
ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲರ್ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.