ಫೆ.2 ರಂದು ರಾಜ್ಯಾದ್ಯಂತ ಬಹು ನಿರೀಕ್ಷೆಯ ‘ಕ್ರಷ್’ ಚಿತ್ರ ತೆರೆಗೆ

ಹೊಸದಿಗಂತ ವರದಿ,ಮಂಗಳೂರು:

ಸ್ಮೈಲಿ ಕ್ರಿಯೇಪನ್ಸ್ ಬೆಂಗಳೂರು ಬ್ಯಾನರ್ ನಲ್ಲಿ ನಿರ್ಮಾಪಕರಾದ ಎಸ್ ಚಂದ್ರಮೋಹನ್ ನಿರ್ಮಾಣದ ‘ಕ್ರಷ್’ ಕನ್ನಡ ಚಲನಚಿತ್ರ ಫೆ.೨ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಮಂಗಳೂರಿನಲ್ಲಿ ಕ್ರಷ್ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಅಭಿ ಎನ್ ಅವರು, ಇದೇ ಮೊದಲ ಬಾರಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಸಿನಿ ಪ್ರಿಯರಿಗೆ ಖಂಡಿತಾ ಈ ಚಿತ್ರ ಇಷ್ಟವಾಗಲಿದೆ ಎಂದರು.

ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸಕಲೇಶಪುರ ಮತ್ತು ಮಂಗಳೂರಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಡೆದಿದೆ. ಅತ್ಯುತ್ತಮ ಕಥಾ ಹಂದರವನ್ನು ಕ್ರಷ್ ಒಳಗೊಂಡಿದೆ. ಉತ್ತಮ ಹಾಡುಗಳೂ ಕೂಡ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದವರು ತಿಳಿಸಿದರು.

ನಿರ್ಮಾಪಕ ಎಸ್.ಚಂದ್ರಮೋಹನ್ ಅವರು ಮಾತನಾಡಿ, ಇದೊಂದು ತಂದೆ ಮಗ ಮತ್ತು ತಾಯಿ ಮಗಳ ಬಾಂಧವ್ಯದ ಕಥಾಹಂದರವನ್ನು ಹೊಂದಿದ್ದು ಯುವ ಜನಾಂಗವನ್ನು ಆಕರ್ಷಿಸುವ ಸಾಕಷ್ಟು ಅಂಶಗಳನ್ನು ಸಿನಿಮಾ ಹೊಂದಿದೆ ಎಂದರು.

ಈ ಹಿಂದೆ ರಂಗ್ ಬಿರಂಗಿ ಮತ್ತು ಇದೇ ಅಂತರಂಗ ಶುದ್ಧಿ ಎಂಬ ಎರಡು ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ಪಂಚಾಕ್ಷರಿ ನಾಯಕನಟನಾಗಿ ನಟಿಸಿದ್ದು ಉತ್ತರ ಕರ್ನಾಟಕದ ಬೆಡಗಿ ಪ್ರತಿಭಾ ಸೊಪ್ಪಿಮಠ ನಾಯಕಿಯಾಗಿ ನಟಿಸಿದ್ದಾರೆ. ಅನುಭವ ಸಿನಿಮಾ ಖ್ಯಾತಿಯ ಅಭಿನಯರವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಹೆಸರಾಂತ ಪೋಷಕ ನಟ ಮಂಜುನಾಥ್ ಹೆಗ್ಗಡೆ, ಮಂಗಳೂರಿನ ವಿನೀತ್, ಸುಧೀರ್ ರಾಜ್ ಉರ್ವ, ಸಂತೋಷ್ ಕೊಲ್ಯ ರಂತಹ ಖ್ಯಾತ ನಟರು ಈ ಸಿನಿಮಾದ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಿ.ಎಸ್.ಸತೀಶ್ ಛಾಯಾಗ್ರಹಣ, ಸಂಕಲನಕಾರರಾಗಿ ಪವನ್, ವಿನೀತ್ ರಾಜ್ ಮೆನನ್ ರವರ ಸುಮಧುರ ಸಂಗೀತವಿದ್ದು, ಯು. ವಿ.ಅನುತ್ತಮ್ ಮತ್ತು ಅಭಿ .ಎನ್. ಸಾಹಿತ್ಯ ರಚಿಸಿದ್ದಾರೆ.

‘ಕ್ರಷ್ ’ ಹಾಡುಬಿಡುಗಡೆ ಸಂದರ್ಭ ನಟರಾದ ಸಂತೋಷ್ ಕೊಲ್ಯ, ಸಮರ್ಥ್, ನಟಿ ದಿವ್ಯಶ್ರೀ ಕಾವೂರು, ಸಹ ನಿರ್ದೇಶಕ ಜೈಚಂದ್ರ, ಗೀತೆ ರಚನೆಕಾರ ಅನುತ್ತಮ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!