ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರಿಗೆ ತೆರಳಿದ ಪತ್ನಿ ಎಷ್ಟು ಕರೆದರೂ ವಾಪಸ್ ಬರಲಿಲ್ಲ ಎಂಬ ಸಿಟ್ಟಲ್ಲಿ ಪತಿ ಮೊಬೈಲ್ ಟವರ್ ಏರಿ ‘ಪ್ರತಿಭಟನೆ’ ನಡೆಸಿದ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಬದ್ನಾಪುರ ತಹಸಿಲ್ನ ದಬಾಡಿ ಗ್ರಾಮದಲ್ಲಿ ನಡೆದಿದೆ.
ಗಣಪತ್ ಬಾಕಲ್ ‘ಪ್ರತಿಭಟನಾಕಾರ’ನಾಗಿದ್ದು, ಅಗ್ನಿಶಾಮಕ ದಳ, ಪೊಲೀಸರ ನಾಲ್ಕು ತಾಸು ಕಾರ್ಯಾಚರಣೆ, ಪತ್ನಿ ವಾಪಸಾಗುವ ಭರವಸೆ ಬಳಿಕ ‘ಪ್ರತಿಭಟನೆ’ ಕೊನೆಗೊಳಿಸಿ ಈತನನ್ನು ಕೆಳಕ್ಕಿಳಿಸಲಾಗಿದೆ.
ಕೌಟುಂಬಿಕ ಮುನಿಸಿನಲ್ಲಿ ಈತನ ಪತ್ನಿ ತವರಿಗೆ ತೆರಳಿದ್ದಳು. ಪದೇ ಪದೇ ಕರೆದರೂ ಆಕೆ ವಾಪಸ್ಸಾಗಿರಲಿಲ್ಲ. ಇದರಿಂದ ಬೇಸತ್ತು ಆತ 100 ಅಡಿ ಎತ್ತರದ ಮೊಬೈಲ್ ಟವರ್ ಏರಿ, ಪತ್ನಿ ಮನೆಗೆ ಮರಳಬೇಕೆಂದು ಆಗ್ರಹಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.