ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು, ರಕ್ತ ಚೆಲ್ಲಿ ಹೋರಾಟ ಹೊರಹಾಕಿದ ಪ್ರತಿಭಟನಾಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ರಾಜ್ಯಾದಾದ್ಯಂತ ಪ್ರತಿಭಟನೆ ಕಾವು ಜೋರಾಗಿದೆ. ಮಂಡ್ಯದಲ್ಲಿ ಉಗ್ರರೂಪ ಪಡೆದ ಹೋರಾಟ ʻರಕ್ತ ಕೊಟ್ಟೇವು, ನೀರು ಕೊಡೇವುʼ ಎಂಬ ಸಿದ್ಧಾಂತಕ್ಕೆ ಹೋರಾಟಗಾರರು ಸಿದ್ಧರಾಗಿದ್ದಾರೆ. ಬೆಳ್ಳಂಬೆಳಗ್ಗೆಯೇ ಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತ ಕೈ ಕೊಯ್ದುಕೊಂಡು ರಕ್ತ ಚೆಲ್ಲಿ ತಮ್ಮ ಹೋರಾಟ ಹೊರಹಾಕಿದ್ದಾರೆ.

ರಕ್ತ ಸುರಿಯುತ್ತಿದ್ದರೂ ಕಾವೇರಿ ನಮ್ಮದು ಘೋಷಣೆಗಳು ಭುಗಿಲೆದ್ದವು, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ ಪ್ರತಿಭಟನಾಕಾರ ನಿರಾಕರಿಸಿದ್ದಾರೆ. ರಕ್ತ ಸುರಿಸುತ್ತಲೇ ಹೋರಾಟಕ್ಕಿಳಿದಿದ್ದಾರೆ.

ಇನ್ನೂ ಸ್ಥಳದಲ್ಲಿದ್ದ ಪೊಲೀಸರು ಎಷ್ಟೇ ಮನವೊಲಿಸಿದರೂ ಜಗ್ಗದ ಕಾರಣ, ಶಾಂತಿಯುತ ಪ್ರತಿಭಟನೆ ನಡೆಸುವಂತೆ ಪೊಲೀಸರು ಮನವಿ ಮಾಡಿದರು. ರಕ್ತ ಕೊಟ್ಟು ಪ್ರಾಣಾಪಾಯ ತಂದುಕೊಳ್ಳುವುದು ಒಳ್ಳೆಯದಲ್ಲ, ಪ್ರತಿಭಟನೆ ಶಾಂತವಾಗಿರಲೆಂದು ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!