ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಮುಕ್ತಾಯಾವಾಗಲಿದೆ.
ಕಲಾಪವು ಇದೇ ತಿಂಗಳ ೩೦ರವರೆಗೆ ನಡೆಯಬೇಕಿತ್ತು. ಆದರೆ ಅನೇಕ ಸದಸ್ಯರು ಅನ್ಯ ಕಾರ್ಯಗಳಿಗೆ ತೆರಳಬೇಕಿದ್ದು, ಅಂದು ಇರುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಡಿ.29ರಂದು ಸಂಜೆಯೇ ಕಲಾಪ ಮುಕ್ತಾಯಗೊಳಿಸಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.