ದಿಗಂತ ವರದಿ ವಿಜಯಪುರ:
ತೀವ್ರ ಕುತೂಹಲ ಕೆರಳಿಸಿದ ಗುಮ್ಮಟ ನಗರಿಯ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಯಲ್ಲಿ ಎರಡೂ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಶಾಸಕ ಯತ್ನಾಳ ಪಡೆಗೆ ಮುಖಭಂಗವಾಗಿದ್ದು, ಸಚಿವ ಎಂ.ಬಿ. ಪಾಟೀಲ ಪಡೆ ಗೆಲುವು ಸಾಧಿಸಿದೆ.
ನಗರದ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಮೆಹಜಬೀನ್ ಹೊರ್ತಿ ಮೇಯರ್ ಹಾಗೂ ದಿನೇಶ ಹಳ್ಳಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮ್ಯಾಜಿಕ ಸಂಖ್ಯೆ 22 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದ್ದು, ಬಿಜೆಪಿ ಅಧಿಕಾರ ಪಡೆಯುವಲ್ಲಿ ವಂಚಿತವಾಗಿದೆ.