ಹೊಸದಿಗಂತ ವರದಿ, ಅಂಕೋಲಾ:
ಮೊಬೈಲ್ ಸಿಮ್ ಕಾರ್ಡ್ ಖರೀದಿಸುವುದಾಗಿ ಅಂಕೋಲಾ ಪಟ್ಟಣಕ್ಕೆ ತೆರಳಿದ ವ್ಯಕ್ತಿಯೋರ್ವ ಮನೆಗೆ ಮರಳಿ ಬರದೇ ಕಾಣೆ ಆಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಂಕಸಾಳ ಸಬಗುಳಿ ನಿವಾಸಿ ಸಚಿನ ಸುರೇಶ ನಾಯ್ಕ (47) ಕಾಣೆಯಾದ ವ್ಯಕ್ತಿ ಯಾಗಿದ್ದು ಈತ ಮೇ 6 ರಂದು ಬೆಳಿಗ್ಗೆ 10-15 ರ ಸುಮಾರಿಗೆ ಮೊಬೈಲ್ ಸಿಮ್ ಕಾರ್ಡ್ ಖರೀದಿಸಲು ಅಂಕೋಲಾಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಬೆಂಗಳೂರು ನಂದಿನಿ ಲೇ ಔಟ್ ನಲ್ಲಿ ವಾಸಿಸುತ್ತಿರುವ ಆತನ ಪತ್ನಿ ಶಿಲ್ಪಾ ಸಚಿವ ನಾಯ್ಕ ಎನ್ನುವವರು ದೂರು ದಾಖಲಿಸಿ ಕಾಣೆ ಆದವರನ್ನು ಹುಡುಕಿ ಕೊಡುವಂತೆ ಆಗ್ರಹಿಸಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.