ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೆಟ್ರೋ ದುರಂತದಿಂದ ತಾಯಿ ಮಗ ಮೃತಪಟ್ಟ ಬೆನ್ನಲ್ಲೇ, ಇತ್ತೀಚೆಗಷ್ಟೇ ಮೆಟ್ರೋ ಕಾಮಗಾರಿಯಿಂದ ಕಬ್ಬಿಣದ ತುಂಡು ಮೂವಿಂಗ್ ಕಾರ್ ಮೇಲೆ ಬಿದ್ದಿತ್ತು.
ಇದೀಗ ಮೆಟ್ರೋ ಸುರಂಗ ಮಾರ್ಗ ನಿರ್ಮಾಣದ ವೇಲೆ ಮತ್ತೊಂದು ಅವಘಡ ಸಂಭವಿಸಿದ್ದು, ನಿರ್ಮಾಣದ ವೇಳೆ ಚಿನ್ನಯ್ಯಪಾಳ್ಯದ ಬಳಿ ರಸ್ತೆ ಕುಸಿದು ಬಿದ್ದಿದೆ.
ಟಿಡಿಎಂ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ, ಇದರ ಪರಿಣಾಮವಾಗಿ ಪಕ್ಕದಲ್ಲಿದ್ದ ಮಸೀದಿ ಬಿರುಕು ಬಿಟ್ಟಿದೆ. ಮಸೀದಿ ಗೋಡೆಗೆ ತಡೆಯಾಗಿ ಕಬ್ಬಿಣದ ಜಾಕ್ಗಳನ್ನು ಸಪೋರ್ಟ್ಗಾಗಿ ನೀಡಲಾಗಿದೆ. ಸದ್ಯ ಜಾಗಕ್ಕೆ ಕಾಂಟ್ರಿಟ್ ತುಂಬಿಸಲಾಗಿದೆ, ಸದ್ಯ ರಸ್ತೆಯನ್ನು ಸಿಬ್ಬಂದಿ ಬಂದ್ ಮಾಡಿದ್ದಾರೆ.