ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಳೆದ ಮೂರು ವರ್ಷದ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಆರೋಪಿಗಳು ಇಬ್ಬರು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ವೇಸಗಿದ ಆರೋಪ ಸಾಬೀತಾಗಿದ್ದು, 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಯ 10 ವರ್ಷ ಕಠಿಣ ಶಿಕ್ಷೆ ಮತ್ತು 42,500 ರೂ. ತಂಡ ವಿಧಿಸಿದೆ.
ಸಂಗಮೇಶ ಉರ್ಫ ದತ್ತು ಮತ್ತು ಬಸವರಾಜ ಕಮಾಟಿ ಎಂಬುವರು ಶಿಕ್ಷೆಗೆ ಒಳಗಾದವರು.
ಧಾರವಾಡದ ಕಮಲಾಪುರ ಮೂರು ವರ್ಷಗಳ ಹಿಂದೆ ಬಾಲಕಿಯನ್ನು ಪರಿಚಯಿಸಿಕೊಂಡು ಚೂಡಾಯಿಸಿತ್ತಾ, ಬೆದರಿಕೆ ಹಾಕಿ ದೈಹಿಕ ಸಂಪರ್ಕ ಮಾಡಿ ಅವಳು ಗರ್ಭಿಣಿಯಾಗುವಂತೆ ಮಾಡಿದ್ದಾನೆ. ಈ ಕುರಿತು ಧಾರವಾಡದ ಉಪನಗರ ಪೋಲಿಸ್ ಠಾಣೆಯ ಪೋಲಿಸರು ಆರೋಪಿತನ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾಗಿದ್ದು ನ್ಯಾಯಾಲಯ ಶಿಕ್ಷೆ ವಿಧಿಸಿದೆ.