ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ಸಂಪನ್ನವಾಗಿದೆ. ಎಲ್ಲ ವಿಧಿವಿಧಾನಗಳಲ್ಲಿಯೂ ಪ್ರಧಾನಿ ಮೋದಿ ಭಾಗಿಯಾಗಿದ್ದು, ಶ್ರೀರಾಮನ ಪ್ರಸಾದ ಸೇವಿಸುವ ಮೂಲಕ 11 ದಿನಗಳ ಉಪವಾಸ ಅಂತ್ಯಗೊಳಿಸಿದ್ದಾರೆ.
ಪ್ರಾಣಪ್ರತಿಷ್ಠೆಗೆ 11 ದಿನಗಳು ಬಾಕಿ ಇದ್ದಂತೆ ಕಠಿಣ ಉಪವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಇಂದು ಪ್ರಸಾದ ಸ್ವೀಕರಿಸುವ ಮೂಲಕ ಉಪವಾಸ ಪೂರ್ಣಗೊಳಿಸಿದ್ದಾರೆ. ನಿತ್ಯ ಗೋಪೂಜೆ, ನೆಲದ ಮೇಲೆ ನಿದ್ದೆ ಹಾಗೂ ಎಳನೀರು ಸೇವನೆ ಮಾಡುತ್ತಿದ್ದರು.
ಅನ್ನದಾನ, ವಸ್ತ್ರದಾನ ದೇಗುಲಗಳಿಗೆ ಭೇಟಿ ನೀಡಿದ್ದರು. ಸ್ವಾಮೀಜಿಗಳು ಮೂರು ದಿನಗಳ ಉಪವಾಸ ಸಾಕು ಎಂದು ಹೇಳಿದ್ದರೂ ಪ್ರಧಾನಿ 11 ದಿನಗಳ ಕಠಿಣ ಉಪವಾಸ ವ್ರತ ಪೂರ್ಣಗೊಳಿಸಿದ್ದಾರೆ.