ಹೊಸದಿಗಂತ ವರದಿ,ಕಲಬುರಗಿ
ಕಲಬುರಗಿ ನಗರದ ಅಕ್ಕಮಹಾದೇವಿ ಲೇಔಟ್, ನಲ್ಲಿ ನೇಣು ಬಿಗಿದುಕೊಂಡು ಸೇಲ್ಸ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಂಬಾರಾಯ ಘಂಟಿ (30) ನೇಣಿಗೆ ಶರಣಾದ ಯವಕನಾಗಿದ್ದು,ಕಲಬುರಗಿ ನಗರದ ಬಿಗ್ ಬಜಾರ್, ನಲ್ಲಿ ಸೆಲ್ಸ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು.
ಅಕ್ಕಮಹಾದೇವಿ ಲೇಔಟ್, ನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಒಂದು ಮಗುವಿನ ಜೊತೆಗೆ ವಾಸವಾಗಿದ್ದನು ಎಂದು ತಿಳಿದು ಬಂದಿದೆ.
ಮಧ್ಯಾಹ್ನದ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.