ಕಾರು ಚಾಲಕನ ಗಮನ ಬೇರೆಡೆ ಸೆಳೆದು ಬರೋಬ್ಬರಿ 18 ಲಕ್ಷ ದೋಚಿದ ಕಳ್ಳರು!

ಹೊಸದಿಗಂತ ವರದಿ ವಿಜಯಪುರ:
ಕಾರು ಚಾಲಕನ ಗಮನ ಬೇರೆಡೆ ಸೆಳೆದು 18 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ.
ಅಡಕೆ ವ್ಯಾಪಾರಿ ಸಿದ್ದಾರಾಮ ಕಾಪ್ಸೆ ಎಂಬುವವರ ಕಾರಿನ ಬ್ಯಾನೆಟ್ ಮೇಲೆ ಆಯಿಲ್ ಚೆಲ್ಲಿ ಅವರ ಗಮನವನ್ನು ಅತ್ತ ಸೆಳೆದು, ಲಕ್ಷಲಕ್ಷ ಹಣವನ್ನು ದೋಚಿ ಮೂವರು ಕಳ್ಳರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಸಿದ್ದಾರಾಮ ಕಾಪ್ಸೆ ಅವರು ಆಗಷ್ಟೇ ಬ್ಯಾಂಕ್ ನಿಂದ ಹಣ ಪಡೆದು ಕಾರಿನಲ್ಲಿ ಬ್ಯಾಗ್ ಇಟ್ಟಿದ್ದರು. ಇದನ್ನು ಗಮನಿಸಿದ ಚಾಲಕಿ ಖದೀಮರು ಸಂಚು ರೂಪಿಸಿ ಬ್ಯಾಗ್ ಸಮೇತ 18 ಲಕ್ಷ ರೂ.ಗಳನ್ನು ಎಗರಿಸಿ ಓಡಿಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!