ಮಳೆಯ ಆಸರೆಗಾಗಿ ಸೇತುವೆ ಕೆಳಗೆ ನಿಂತಿದ್ದ ಕುರಿಗಳ ಮೇಲೆ ಹರಿದ ರೈಲು

ಹೊಸದಿಗಂತ ವರದಿ, ವಿಜಯಪುರ:

ಮಳೆಯ ಆಸರೆಗಾಗಿ ಸೇತುವೆ ಕೆಳಗೆ ನಿಂತಿದ್ದ ಕುರಿಗಳ ಮೇಲೆ ರೈಲು ಹರಿದು, 80 ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ರೈಲು ನಿಲ್ದಾಣದ ಬಳಿ ನಡೆದಿದೆ.
ತಳೇವಾಡ ಗ್ರಾಮದ ಶಿವಪ್ಪ ಕಲ್ಲಪ್ಪ ಮೂಕನವರ- 25, ಚಂದ್ರಪ್ಪ ಖರ್ಗೆ- 43, ಶೇಖಪ್ಪ ಮೂಕನವರ, ಮಲ್ಲಪ್ಪ ಕಾಡಸಿದ್ದ – 18 ಸೇರಿ 86 ಕುರಿಗಳು ಸಾವಿಗೀಡಾಗಿವೆ.
ಕುರಿಗಳ ಸಾವಿನಿಂದ ಪರಿಹಾರಕ್ಕಾಗಿ ಕುರಿಗಾಯಿ ಕಣ್ಣೀರು ಹಾಕುತ್ತಿದ್ದಾರೆ. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!