ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಚಿರತೆ ಕಾಣಿಸಿದ್ದು, ಜಿಂಕೆ ಕೊಂದು ತಿಂದಿತ್ತು. ಇದನ್ನು ಕಂಡ ಜನ ಚಿರತೆ ಸೆರೆಗೆ ಆಗ್ರಹಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಚಿರತೆ ಸೆರೆಗೆ ಹರಸಾಹಸ ಪಡುತ್ತಿದೆ. ಆದರೆ ಚಿರತೆ ಕಾಣಿಸಿ ಎರಡು ದಿನಗಳಾದರೂ ಚಿರತೆ ಸೆರೆಗೆ ಸಿಕ್ಕಿಲ್ಲ. ಇದೀಗ ಅಲ್ಲಿ ಇರುವುದು ಒಂದು ಚಿರತೆ ಎಂದುಕೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಕಿಂಗ್ ವಿಚಾರವೊಂದು ತಿಳಿದಿದೆ.
ಇಲ್ಲಿ ಇರುವುದು ಒಂದು ಚಿರತೆ ಅಲ್ಲ, ನಾಲ್ಕು! ಹೌದು, ನಾಲ್ಕು ಚಿರತೆಗಳು ಕಾಣಿಸಿದ್ದು, ಜನ ಭಯಭೀತರಾಗಿದ್ದಾರೆ. ಹೆದರಿಕೊಂಡೇ ಗುಂಪಿನಲ್ಲಿ ಜನ ಓಡಾಟ ನಡೆಸುತ್ತಿದ್ದಾರೆ. ರಾತ್ರಿಯಿಡೀ ನಿದ್ದೆಯಿಲ್ಲದೆ ಹೆದರಿ ಏಳುತ್ತಿದ್ದಾರೆ. ಇನ್ನು ಎಷ್ಟು ಸಮಯವಾದರೂ ಬೆಳಗ್ಗೆ ತುರಹಳ್ಳಿ ಪ್ರದೇಶದಲ್ಲಿ ವಾಕಿಂಗ್ ಮಾಡಲು ಯಾರೂ ಧೈರ್ಯ ಮಾಡುತ್ತಿಲ್ಲ. ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸಿ ಚಿರತೆ ಸೆರೆಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.