”ನಂಬಿಕೆ ದ್ರೋಹದ ಪ್ರಶ್ನೆಯೇ ಇಲ್ಲ, ಅಕ್ಷಯ್ ಕುಮಾರ್ ನನ್ನ ಸಹೋದರನಂತೆ ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ಷಯ್ ಕುಮಾರ್ ಹಾಗೂ ಕಪಿಲ್ ಶರ್ಮಾ ನಡುವೆ ಮನಸ್ತಾಪ ಆಗಿದ್ದು, ಬಚ್ಚನ್ ಪಾಂಡೆ ಸಿನಿಮಾ ಪ್ರಮೋಷನ್‌ಗೆ ಅಕ್ಷಯ್ ಕಪಿಲ್ ಶರ್ಮಾ ಶೋಗೆ ಬರುತ್ತಿಲ್ಲ ಎಂದು ಸುದ್ದಿಯಾಗಿತ್ತು.
ಈ ಬಗ್ಗೆ ಕಪಿಲ್ ಸ್ಪಷ್ಟನೆ ನೀಡಿದ್ದು, ನಾನು ಅಕ್ಷಯ್ ಕುಮಾರ್ ಸಹೋದರರಂತೆ ಇದ್ದೇವೆ. ಏನೋ ಸಣ್ಣ ಮಿಸ್‌ಕಮ್ಯುನಿಕೇಷನ್ ಆಗಿತ್ತು. ಅಕ್ಷಯ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಅಕ್ಷಯ್ ಕುಮಾರ್ ಕಪಿಲ್ ಶರ್ಮಾ ಶೋಗೆ ಬಂದಾಗ ಪ್ರಧಾನಿ ಮೋದಿ ಅವರ ಜೊತೆ ಅಕ್ಷಯ್ ಸಂದರ್ಶನದ ವಿಚಾರವನ್ನು ಕಪಿಲ್ ಪ್ರಸ್ತಾಪ ಮಾಡಿದ್ದರು. ಆದರೆ ಈ ವಿಷಯ ಪ್ರಸ್ತಾಪ ಮಾಡಿದ್ದು ಅಕ್ಷಯ್‌ಗೆ ಇಷ್ಟ ಆಗಿರಲಿಲ್ಲ. ದೇಶದ ಪ್ರಧಾನಿ ಹೆಸರನ್ನು ಚಾನೆಲ್‌ನಲ್ಲಿ ಬಳಸುವುದು ಸರಿಯಲ್ಲ ಎಂದು ಅಕ್ಷಯ್ ಹೇಳಿದ್ದರು. ತದನಂತರ ಈ ಸೀನ್ ಎಡಿಟ್ ಮಾಡಿ, ಇದನ್ನು ಟೆಲಿಕಾಸ್ಟ್ ಮಾಡಬೇಡಿ ಎಂದು ಅಕ್ಷಯ್ ಹೇಳಿದ್ದರು. ಆದರೂ ಈ ಸೀನ್ ಕಟ್ ಆಗಿಲ್ಲದ್ದು ಅಕ್ಷಯ್ ಸಿಟ್ಟಿಗೆ ಕಾರಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!