ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ದಿನಕಳೆದಂತೆ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಇದೀಗ ಅಂತ್ಯಸಂಸ್ಕಾರಕ್ಕೂ ನೀರಿಲ್ಲದಂತಾಗಿದೆ.
ಕ್ರಿಮೆಟೋರಿಯಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅಂತಿಮ ವಿಧಿ ವಿಧಾನಗಳನ್ನು ನಡೆಸಲು ಜನರು ಪರದಾಡುತ್ತಿದ್ದಾರೆ. ಕೆಲ ಸಂಪ್ರದಾಯಗಳಲ್ಲಿ ಮೃತರ ದೇಹಕ್ಕೆ ಅಂತ್ಯಕ್ರಿಯೆ ಸ್ಥಳದಲ್ಲಿಯೇ ಸ್ನಾನ ಮಾಡಿಸಿ ನಂತರ ಅಂತ್ಯಕ್ರಿಯೆ ಮಾಡಲಾಗುತ್ತದೆ. ಇನ್ನು ಕೆಲ ಸಂಪ್ರದಾಯಗಳಲ್ಲಿ ಮಡಿಕೆ ನೀರು ಒಡೆದು ನಂತರ ಬೆಂಕಿ ಇಡಲಾಗುತ್ತದೆ. ಆದರೆ ಕ್ರೆಮೆಟೋರಿಯಂಗಳಲ್ಲಿ ಇದ್ಯಾವುದಕ್ಕೂ ನೀರಿಲ್ಲದಂತಾಗಿದೆ.
ಅಂತ್ಯಕ್ರಿಯೆ ಮುಗಿಸಿ ಮನೆಗೆ ಹೋಗುವವರ ಕಾಲಿಗೂ ಒಂದು ಚೊಂಬು ನೀರು ಸಿಗದಂತಾಗಿದೆ. ಹರಿಶ್ಚಂದ್ರ ಘಾಟ್, ಸುಮ್ಮನಹಳ್ಳಿ ಸ್ಮಶಾನ ಮತ್ತಿತರ ಸ್ಥಳಗಳಲ್ಲಿ ನೀರಿಲ್ಲದೆ ಸಮಸ್ಯೆಯಾಗಿದೆ.