ವೃದ್ಧರ ಮನೆಗೆ ಕದಿಯೋಕೆ ಬಂದ ಕಳ್ಳರು, ಏನೂ ಸಿಗದೆ ಪಾಪ ಅನಿಸಿ 500 ರೂಪಾಯಿ ಇಟ್ಟು ಹೋದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೃದ್ಧರೊಬ್ಬರ ಮನೆಗೆ ಕಳ್ಳತನ ಮಾಡೋಕೆ ಬಂದ ಕಳ್ಳರಿಗೆ ಅಜ್ಜ ಅಜ್ಜಿ ಮನೆಯನ್ನು ನೋಡಿ ಪಾಪ ಅನ್ನಿಸಿಬಿಟ್ಟಿದೆ. ಕದಿಯೋಕೆ ಏನೂ ಸಿಗದೇ ಪಾಪ ಅಜ್ಜಿ ಅಜ್ಜ ಬಡವರು ಅವರಿಗೇ ಹಣ ಕೊಟ್ಟು ಹೋಗೋಣ ಎಂದು ಕಳ್ಳರು ನಿರ್ಧಾರ ಮಾಡಿದ್ದಾರೆ.

ನವದೆಹಲಿಯ ರೋಹಿಣಿ ಸೆಕ್ಟರ್‌ನಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ರಾಮಕೃಷ್ಣ ಎನ್ನುವವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಕಳ್ಳರು ನುಗ್ಗಿದ್ದಾರೆ. ನೆರೆ ಮನೆಯವರು ರಾಮಕೃಷ್ಣ ಅವರಿಗೆ ಕರೆ ಮಾಡಿ ನಿಮ್ಮ ಮನೆಗೆ ಕಳ್ಳರು ಬಂದಿದ್ದಾರೆ ಎಂದು ಕರೆ ಮಾಡಿದ್ದಾರೆ.

ಆಗ ರಾಮಕೃಷ್ಣ ಅವರು ಮನೆಗೆ ಬಂದಿದ್ದಾರೆ. ಮನೆಯ ಬೀಗ ಒಡೆದಿದ್ದು, ಮನೆಯಲ್ಲಿ ಕೆಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಾಣಿಸಿದೆ. ಇದರ ಜೊತೆಗೆ ಕಳ್ಳರು 500 ರೂಪಾಯಿ ಇಟ್ಟು ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!