ಹೊಸದಿಗಂತ ವರದಿ ಗದಗ:
ರಾಜ್ಯದಲ್ಲಿ ಮಳೆಯಿಂದ ಜನರು ತತ್ತರಿಸುತ್ತಿರುವ ಸಮಯದಲ್ಲಿ, ರೈತರು ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಸಿದ್ದರಾಮೋತ್ಸವ, ಶಿವಕುಮಾರೋತ್ಸವ ಮಾಡುವ ಸಮಯ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಬಿ.ಸಿಪಾಟೀಲ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲ ಕಷ್ಟಕರ ಸಮಯದಲ್ಲಿ ಅವರು ಉತ್ಸವಗಳನ್ನು ಮಾಡಿಕೊಂಡಿದ್ದಾರೆ. ಆದರೆ, ನಾವು ರೈತರ ಬಗ್ಗೆ ಚಿಂತನೆ ಮಾಡುತ್ತೆವೆ. ಕಾಂಗ್ರೆಸ್ನವರು ಹೇಳಿಕೊಳ್ಳಲಿಕ್ಕೆ ಕೆಲಸವು, ಇಲ್ಲ ಕಾರ್ಯಕ್ರಮಗಳು ಇಲ್ಲ, ಅತ್ತು ಕರೆದು, ಸಾಕಷ್ಟು ದುಡ್ಡು ಖರ್ಚು ಮಾಡಿ, ಕಷ್ಟಪಟ್ಟು ಜನರನ್ನು ಉತ್ಸವಕ್ಕೆ ಕರೆಸಿಕೊಂಡಿದ್ದಾರೆ. ಅದನ್ನು ನೋಡಿ ನಮಗೇನು ನಡುಕ ಉಂಟಾಗಿಲ್ಲ, ನಮಗೆ ನಾವು ಮಾಡಿದಂತಹ ಕಾರ್ಯಕ್ರಮಗಳು ಸಾಕಷ್ಟಿವೆ, ಆ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೆವೆ. ಜನರ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.