SHOCKING | ಈ ವ್ಯಕ್ತಿಗೆ ಕುಡಿತದ ನಶೆಯಲ್ಲಿ ನೀರ‍್ಯಾವ್ದು, ಆಸಿಡ್ ಯಾವ್ದು ಗೊತ್ತಾಗ್ಲೇ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮರಾಜನಗರದಲ್ಲಿ ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪ್ರಾಣಕ್ಕೇ ಕಂಟಕ ತಂದುಕೊಂಡಿದ್ದಾನೆ. ಕೊಳ್ಳೇಗಾಲದ ಮಳ್ಳೂರು ಗ್ರಾಮದಲ್ಲಿ ಸಿದ್ದರಾಜು ಎನ್ನುವವರು ಕುಡಿತದ ಅಮಲಿನಲ್ಲಿ ನೀರು ಎಂದುಕೊಂಡು ಆಸಿಡ್ ಕುಡಿದು ಮೃತಪಟ್ಟಿದ್ದಾರೆ.

ಟಾಯ್ಲೆಟ್ ರೂಂ ಶುಚಿಮಾಡಲು ಇಟ್ಟಿದ್ದ ಟಾಯ್ಲೆಟ್ ಕ್ಲೀನರ್ ತೆಗೆದುಕೊಂಡು ನೀರು ಎಂದುಕೊಂಡು ಗಟಗಟನೆ ಕುಡಿದಿದ್ದಾರೆ. ತಕ್ಷಣವೇ ಹೊಟ್ಟೆಉರಿಯಿಂದ ಒದ್ದಾಡಿದ್ದಾರೆ. ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!