ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ಹಾಗೂ ಇನ್ನುಳಿದ ಸಾಕಷ್ಟು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈ ಬಾರಿ ಕಳೆದ ಬಾರಿಗಿಂತಲೂ ಬಿಸಿಲು ಹೆಚ್ಚಾಗಿದ್ದು, ನಾನಾ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕಿದ್ದು, ಆರೋಗ್ಯ ಇಲಾಖೆ ಬೇಸಿಗೆ ಗೈಡ್ಲೈನ್ಸ್ನ್ನು ಬಿಡುಗಡೆ ಮಾಡಿದೆ.
ಗೈಡ್ಲೈನ್ಸ್ನಲ್ಲಿ ಏನೇನಿದೆ?
ಬಾಯಾರಿಕೆ ಇಲ್ಲದೆಯೂ 20 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು.
ಪ್ರಯಾಣದ ಸಮಯದಲ್ಲಿ ನೀರಿನ ಬಾಟಲ್ ಇಟ್ಟುಕೊಂಡಿರಬೇಕು.
ಜಂಕ್ ಫುಡ್ ತ್ಯಜಿಸಿ ಹಣ್ಣು, ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು.
ಸಿಂಥೆಟಿಕ್ ಬಟ್ಟೆ ಬಿಟ್ಟು ಕಾಟನ್ ಬಟ್ಟೆಗಳನ್ನು ಧರಿಸಬೇಕು.
ಮಧ್ಯಾಹ್ನ 12 ರಿಂದ ಮಧ್ಯಾಹ್ನ3ಗಂಟೆವರೆಗೆ ಆದಷ್ಟು ಹೊರಗಿನ ಓಡಾಟ ನಿಲ್ಲಿಸಬೇಕು.
ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಹೋಗಬೇಕು.
ಮನೆಯ ಕಿಟಕಿ ಬಾಗಿಲು ತೆಗೆಯಬೇಕು, ಅಡುಗೆ ಮನೆಯ ವೆಂಟಿಲೇಷನ್ ಪರೀಕ್ಷಿಸಿ.
ಮನೆಯಿಂದ ಹೊರಗೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದೆಯೂ ನೀರು ಕುಡಿಯಬೇಕು.
ಮಕ್ಕಳು, ವೃದ್ಧರು ಹಾಗೂ ಸಾಕುಪ್ರಾಣಿಗಳನ್ನು ಕಾರ್ ಒಳಗೆ ಕೂರಿಸಿ ಹೊರಗಿನಿಂದ ಲಾಕ್ ಮಾಡುವಂತಿಲ್ಲ.
ನೀರಿನಂಶ ದೇಹದಲ್ಲಿ ಹೆಚ್ಚಿರಬೇಕು ಹಾಗಾಗಿ ಕಾಫಿ,ಟೀ ಸೇವನೆ ಕಡಿಮೆ ಮಾಡಿ.
ಮದ್ಯಪಾನ ನಿಲ್ಲಿಸಿ